‘ಮನುಷ್ಯನಲ್ಲಿನ ಶ್ರದ್ಧೆ, ನಂಬಿಕೆಯಿಂದಲೇ ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತವೆ. ಯಾರಲ್ಲಿ ಶ್ರದ್ಧೆ ಬಲವಾಗಿರುತ್ತದೆಯೋ ಅವರ ಆತ್ಮಬಲವೂ ವೃದ್ಧಿಸುತ್ತದೆ. ಇಂಥ ಆತ್ಮಬಲದಿಂದಲೇ ನಾವು ಕೊರೊನಾದಂತಹಸೋಂಕು ಗೆಲ್ಲಬಹುದು. ದೀಪ ಹಚ್ಚುವುದರಿಂದಾಗಲೀ, ಚಪ್ಪಾಳೆ ತಟ್ಟುವುದರಿಂದಾಗಲೀ ಕೊರೊನಾ ಹೋಗುವುದಿಲ್ಲ. ಆದರೆ, ಈ ಪ್ರಕ್ರಿಯೆಗಳು ನಮ್ಮ ಆತ್ಮಬಲ ವೃದ್ಧಿಸುತ್ತವೆ’ ಎಂದು ಶ್ರೀಪಾದಂಗಳವರು ತಿಳಿಸಿದರು.