ಸಭೆಯಲ್ಲಿ ಹಾಜರಿದ್ದ ಸದಸ್ಯರಾದ ನಾಗೇಂದ್ರ ತಾಂಬೆ, ಮಹಾನಂದ ತುಕಾಣೆ, ವಿಶ್ವನಾಥ ಪವಾಡಶೆಟ್ಟಿ, ಶರಣಪ್ಪ ಜಮದಾರಮ ಬಸವರಾಜ ಬೆಳಮಗಿ, ಪಾರ್ವತಿ ಎನ್ ತಾಂಬೆ ಅವರು ‘ಕಳೆದ ಒಂದು ವರ್ಷದಿಂದ ಸಾಮಾನ್ಯ ಸಭೆ ನಡೆಸುತ್ತಿಲ್ಲ, ಸಭೆ ಕರೆಯದೆ, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಕೈಗೊಳ್ಳದೆ ಪಂಚಾಯಿತಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.