ನೀರಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ಮಹಿಳೆಯ ದೇಹ ಮಂಗಳವಾರ ಕಾಣಿಸಿತ್ತು. ಆದರೆ, ಪೊಲೀಸರು ಅಲ್ಲಿಗೆ ತೆರಳುವಷ್ಟರಲ್ಲಿ ಅದು ಮುಂದಕ್ಕೆ ಹೋಗಿತ್ತು. ಬುಧವಾರ ಬೆಳಿಗ್ಗೆ ಪ್ರವಾಹ ತಗ್ಗಿದ್ದರಿಂದ ದಂಪತಿ ಮೃತದೇಹಗಳು ಜಟ್ಟೂರು ಸಮೀಪದಲ್ಲಿ ಸಿಕ್ಕಿವೆ. ಮೃತರ ಪುತ್ರ ವೆಂಕಟಪ್ಪ ಅವರು ದೇಹಗಳನ್ನು ಗುರುತಿಸಿದರು ಎಂದಿದ್ದಾರೆ.
ಸುಲೇಪೇಟ ಸಬ್ ಇನ್ಸ್ಪೆಕ್ಟರ್ ಸುಖಾನಂದ ಸಿಂಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.