2015ರಲ್ಲಿ ಹಿರೋಳಿ ಗ್ರಾಮದಲ್ಲಿ ಕೊಲೆ ಯತ್ನ ಹಾಗೂ 2016ರಲ್ಲಿ ಸರಸಂಬಾ ಗ್ರಾಮದಲ್ಲಿ ಮೋಟಾರ್ ಪೈಪ್ ಹಾಗೂ ಸಾಮಗ್ರಿಗಳು ಕಳವು ಮಾಡಿದ ಪ್ರಕರಣದ ಆರೋಪಿಗಳಾಗಿದ್ದರು.
ಪಿಎಸ್ಐ ಮಲ್ಲಣ್ಣ ಯಲಗೊಂಡ ನೇತೃತ್ವದಲ್ಲಿ ಸಿಬ್ಬಂದಿಯಾದ ಹಣಮಂತ, ಬೀರಣ್ಣಾ ಪೂಜಾರಿ, ಮಲ್ಲಿನಾಥ ಸಕ್ಕರಗಿ ಅವರು ಹಿರೋಳಿ ಗ್ರಾಮದ ಸರಹದ್ದಿನಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿತಲಿ ಗ್ರಾಮದಲ್ಲಿ 9 ಕುರಿ ಕಳವು
ಆಳಂದ: ತಾಲ್ಲೂಕಿನ ಚಿತಲಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಕುರಿಗಳನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಕಳ್ಳತನ ಮಾಡಿದ್ದಾರೆ.
ಗ್ರಾಮದ ದತ್ತಾತ್ರೇಯ ಅಪ್ಪಾರಾವ ಕೌಲಗಿ ಅವರು ಮನೆ ಮುಂದಿನ ಕೊಟ್ಟಿಗೆಯಲ್ಲಿ 30ಕ್ಕೂ ಹೆಚ್ಚು ಕುರಿಗಳನ್ನು ಕಟ್ಟಿದ್ದರು. ರಾತ್ರೋ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಕುರಿಗಳ್ಳರು 9 ಕುರಿಗಳನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ.
ಅಂದಾಜು ₹ 1 ಲಕ್ಷ ಮೌಲ್ಯದ ಕುರಿಗಳು ಕಳೆದುಕೊಂಡ ಘಟನೆಯಿಂದ ಸಹಜವಾಗಿ ಬಡ ಕುರಿಗಾಯಿ ರೈತ ಸಂಕಷ್ಟ ಎದುರಾಗಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.