ವಿದ್ಯಾರ್ಥಿ ಮಹಮ್ಮದ್ ಮುದ್ದಸೀರ್(19) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಪ್ರಕರಣ ಸಂಬಂಧ ಛೋಟಾ ರೋಜಾ ಬಡಾವಣೆ ನಿವಾಸಿ ಶೇಖ್ ಆಮೀರ್(21), ವಿದ್ಯಾರ್ಥಿ ಸೈಯದ್ ಯಾಸೀನ್(19) ಮತ್ತು ಕಿಟಕಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕಮ್ರನ್(22) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.