ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಂಗ ನಿರ್ದೇಶಕ ಶಂಕ್ರಯ್ಯ ಘಂಟಿ, ರಂಗಾಸಕ್ತರಾದ ಎಂ.ಬಿ. ಸಜ್ಜನ, ಪ್ರೊ.ಪಿ.ಬಿ. ಸಂತಪ್ಪನವರ, ಕಿರಣ ಪಾಟೀಲ, ರಾಘವೇಂದ್ರ ಹಳೆಪ್ಯಾಟಿ, ಅಶೋಕ ಚಿತ್ಕೋಟಿ, ಆದರ್ಶ ಕಾಳಗಿ, ‘ನಾಟಕೋತ್ಸವದ ಆಯೋಜಕರು ಟಿಕೆಟ್ ನಿಗದಿಪಡಿಸದಿದ್ದರೆ ಜನರು ಬರುವುದಿಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. ಸಾಂಸ್ಕೃತಿಕ ಸಂಘಟನೆಯ ನೆರವಿನಿಂದ ಇಡೀ ನಾಟಕೋತ್ಸವದ ಖರ್ಚು ಭರಿಸಲು ಆಗುವುದಿಲ್ಲ ಎಂದಾದರೆ ಎರಡೇ ದಿನ ಉತ್ಸವ ಮಾಡಲಿ’ ಎಂದು ಸಲಹೆ ನೀಡಿದ್ದಾರೆ.