‘ಮಂಗಳವಾರ ಪುರಸಭೆ ಕಚೇರಿಗೆ ಬಂದ ಆನಂದಕುಮಾರ್ ನಕಲಿ ಬಿಲ್ಗಳನ್ನು ತಯಾರಿಸಿ ಚೆಕ್ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ನನ್ನ ಕುತ್ತಿಗೆ ಹಿಸುಕಿ ಕೆಳಗೆ ಕೆಡವಿ ಒದ್ದಿದ್ದಾರೆ. ಇದರಿಂದಾಗಿ ಕುತ್ತಿಗೆಗೆ ಗಾಯವಾಗಿದೆ. ಕಚೇರಿಯಲ್ಲಿದ್ದ ಸಿಬ್ಬಂದಿಯಾದ ಅನ್ವರ್, ಶೋಭಾರಾಣಿ, ಮಹ್ಮದ್ ಏಜಾಜ್, ಪೌರಕಾರ್ಮಿಕ ಬಸಪ್ಪ ರಕ್ಷಿಸಿದರು. ನಂತರ ಆನಂದಕುಮಾರ್ ಹಾಗೂ ಶಶಿಕುಮಾರ್ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಅಭಯಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.