ಧಾರ್ಮಿಕ ವಿಚಾರ ಮಾತನಾಡಲ್ಲ:ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ರಾಜಕೀಯದಲ್ಲಿ ಧಾರ್ಮಿಕ ವಿಚಾರ ಮಾತನಾಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ಮಾತುಗಳು ಅಗತ್ಯವಿಲ್ಲ. ನಾವು ಪಕ್ಷದ ಪ್ರಣಾಳಿಕೆ ಮೇಲೆ ಮತ ಕೇಳುತ್ತೇವೆ. ಧರ್ಮಕ್ಕೆ ಸಂಬಂಧಿಸಿದಂತೆ ಬೇಕಿದ್ದರೆ ಧಾರ್ಮಿಕ ಸಂವಾದ ಆಯೋಜಿಸಲಿ, ನಾನು ಮಾತನಾಡುತ್ತೇನೆ’ ಎಂದರು.