‘ಉದ್ಯೋಗ ಖಾತ್ರಿಯು ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ಕಾರ್ಯಕ್ರಮ. ಆದರೆ, ಎರಡು ವರ್ಷಗಳಿಂದ ರಾಜ್ಯಕ್ಕೆ ಬರಬೇಕಾದ ₹ 2,300 ಕೋಟಿ ಬಾಕಿ ಇದೆ. ಸದ್ಯಕ್ಕೆ ರಾಜ್ಯ ಸರ್ಕಾರದ ದುಡ್ಡಿನಲ್ಲೇ ಯೋಜನೆ ಮುಂದುವರಿದಿದೆ. ನಮ್ಮ ಹಣ ಬಳಸಿಕೊಂಡು ಅದಕ್ಕೆ ಪ್ರಧಾನಿ ಹೆಸರು ಹೇಳಿಕೊಂಡು ತಿರುಗುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೇಂದ್ರದ ಧೋರಣೆ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲು ಅವಕಾಶವಿದೆ. ಆ ಹಕ್ಕನ್ನು ಬಳಸಿಕೊಳ್ಳುತ್ತೇನೆ’ ಎಂದರು. ‘ನೆರೆ ಹಾವಳಿಯಿಂದಾಗಿ ರಾಜ್ಯದ ಬಹುಪಾಲು ಭಾಗ ತತ್ತರಿಸಿಹೋಗಿದೆ. ಇದಾವುದೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ನಮ್ಮ ಪ್ರಧಾನಿ ವರ್ತಿಸುತ್ತಿದ್ದಾರೆ. ಬಿಹಾರ, ಕೇರಳ ರಾಜ್ಯಗಳಿಗೆ ಮಿಡಿಯುವ ಇವರ ಮನಸ್ಸು ಕರ್ನಾಟಕದ ಮೇಲೇಕೆ ಮಲತಾಯಿ ಧೋರಣೆ ತಾಳುತ್ತಿದೆ’ ಎಂದೂ ಪ್ರಶ್ನಿಸಿದರು.