ಇದೇ ವೇಳೆ 160ಕ್ಕೂ ಹೆಚ್ಚು ಯುವಕರು ಪಥಸಂಚಲನ ನಡೆಸಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ವಾದ್ಯ ಬಾರಿಸುತ್ತ ಭಗವಾ ಧ್ವಜ ಹಿಡಿದು ಪಥ ಸಂಚಲನ ನಡೆಸಿದರು. ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗ ಕಾರ್ಯವಾಹ ಡಾ. ನಾಗರಾಜ ಮನ್ನೆ ಅವರು ಮಾತನಾಡಿ ದೇಶ ಹಾಗೂ ಧರ್ಮದ ಬಗೆಗೆ ಅಭಿಮಾನ ಬೆಳೆಸಿಕೊಳ್ಳುವುದರ ಜತೆಗೆ ಹಿಂದೂ ಸಾಂಸ್ಕೃತಿಕ ಪರಂಪರೆಯ ಹಿರಿಮೆ ಕುರಿತು ವಿವರಿಸಿದರು.