ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಜಟ್ಟೂರು ಬಳಿ ಕಾಗಿಣಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಪ್ರವಾಹದ ನೀರಿನಲ್ಲಿ ಮಹಿಳೆಯ ಶವ ಗೋಚರವಾಗಿದ್ದು, ಸ್ಥಳೀಯರು ಸುಲೇಪೇಟ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶವ ಹೊರ ತೆಗೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷ ವೆಂಕಟರೆಡ್ಡಿ ಹಾಗೂ ಹಲಕೋಡಾದ ಮುಖಂಡ ಭಾನುಪ್ರಸಾದ ತಿಳಿಸಿದರು.
ಶವ ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಿಎಸ್ಐ ಸುಖಾನಂದ ಸಿಂಗೆ ನೇತೃತ್ವದಲ್ಲಿ ಶವ ಹೊರ ತೆಗೆಯಲಾಗುತ್ತಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಕೆ.ಜಿ ಜಗದೀಶ ತಿಳಿಸಿದ್ದಾರೆ.