‘ಎಲ್ಲ ದಾಖಲಾತಿಗಳನ್ನು ಹಾಜರುಪಡಿಸಿ ಆಯ್ಕೆಯಾಗಿದ್ದೆ. ಸೋಮವಾರ ಕಲಬುರ್ಗಿಯ ಸೂಪರ್ ಮಾರ್ಕೆಟ್ನಲ್ಲಿರುವ ತರಬೇತಿ ಕೇಂದ್ರಕ್ಕೆ ತೆರಳಿದಾಗ ಅಲ್ಲಿನ ಸಿಬ್ಬಂದಿ ರಾಯಚೂರು, ಬೀದರ್ ಜಿಲ್ಲೆಯಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಸದ್ಯಕ್ಕೆ ತರಬೇತಿ ನೀಡಲಾಗದು ಎಂದು ನನ್ನನ್ನು ವಾಪಸ್ ಕಳಿಸಿದರು’ ಎಂದು ರಾಯಚೂರಿನ ವಿದ್ಯಾರ್ಥಿನಿ ಖಾಜಾ ಬಾನು ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ತಿಳಿಸಿದರು.