ನಿಮ್ಮ ಮತವನ್ನು ಹಣ, ಹೆಂಡ, ಕಿವಿಯೋಲೆ ಕೊಡುವವರಿಗೆ ಮಾರಿಕೊಳ್ಳಬೇಡಿ. ಹಾಗೆ ಮಾರಿಕೊಂಡರೆ ನಿಮಗೆ ಪ್ರಶ್ನಿಸುವ ಹಕ್ಕೂ ಇಲ್ಲವಾಗುತ್ತದೆ. ನಿಮ್ಮ ಪರವಾಗಿ ವಿಧಾನಸಭೆಯಲ್ಲಿ ಕೆಲಸ ಮಾಡುವವರನ್ನು ಆರಿಸಿ ಕಳುಹಿಸಿರಿ. ಇಂದಿನ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ಜನಗಳ ಹಿತಾಸಕ್ತಿಯನ್ನೇ ಮರೆಯುತ್ತಾರೆ. ಇಂಥವರನ್ನು ಶಾಶ್ವತವಾಗಿ ಮನೆಯಲ್ಲೇ ಕೂರಿಸಿ ಎಂದು ಸಲಹೆ ನೀಡಿದರು.