<p><strong>ಕಲಬುರಗಿ:</strong> 12ನೇ ಶತಮಾನದಲ್ಲಿ ವಿಶಿಷ್ಟ ಸಾಹಿತ್ಯ ಪ್ರಕಾರ, ಸಮಸಮಾಜ ನಿರ್ಮಾಣದ ಆಶಯ, ಕಾಯಕ, ದಾಸೋಹ, ಭಕ್ತಿ ಮಾರ್ಗ ತೋರುವ ಬಸವಾದಿ ಶರಣರ ವಚನಗಳ ಕಂಪು ಈಗ ಗಡಿಯಾಚೆಗೂ ಪಸರಿಸುತ್ತಿದೆ.</p>.<p>ಸಂಶೋಧಕ ದಿ.ಎಂ.ಎಂ.ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ರಾಜ್ಯ ಸರ್ಕಾರ ‘ಸಮಗ್ರ ವಚನ ಸಂಪುಟ’ಗಳನ್ನು ಪ್ರಕಟಿಸಿತ್ತು. ಅದರಿಂದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ 173 ಶರಣ–ಶರಣೆಯರ ಆಯ್ದ 2,500 ವಚನಗಳನ್ನು ಅನುವಾದಿಸುವ ಕಾರ್ಯ 2008ರಲ್ಲಿ ಶುರುವಾಗಿತ್ತು.</p>.<p>ಈತನಕ 28 ಭಾರತೀಯ ಹಾಗೂ 9 ವಿದೇಶಿ ಭಾಷೆಗಳಿಗೆ ಈ ವಚನಗಳು ಅನುವಾದಗೊಂಡಿವೆ. ಇದಕ್ಕಾಗಿ ಬಸವ ಸಮಿತಿಯು ಕರ್ನಾಟಕ ಕೇಂದ್ರಿಯ ವಿ.ವಿ (ಸಿಯುಕೆ), ಬನಾರಸ್ ಹಿಂದೂ ವಿ.ವಿ, ಅಸ್ಸಾಂ ವಿ.ವಿ, ಜೆಎನ್ಯು, ಕೆಯುಡಿ ಸೇರಿದಂತೆ 15 ವಿ.ವಿಗಳೊಂದಿಗೆ ಸೇರಿ ಹಗಲು ರಾತ್ರಿ ಪರಿಶ್ರಮದ ಬೆವರು ಹರಿಸಿದೆ.</p>.<p>ಏ.20ರಂದು ಬೆಂಗಳೂರಿನಲ್ಲಿ, ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಚೈನೀಸ್, ಜರ್ಮನ್, ಜಾಪನೀಸ್, ಫ್ರೆಂಚ್, ಸ್ಪ್ಯಾನಿಷ್, ನೇಪಾಳಿ ಭಾಷೆಗಳಲ್ಲಿ ಅನುವಾದಿತ ಕೃತಿಗಳ ಸಾಂಕೇತಿಕ ಬಿಡುಗಡೆಗೆ ಆಗಲಿದೆ. </p>.<p><strong>3 ಭಾಷೆಗಳಿಗೆ ಸಿಯುಕೆ ಸಹಯೋಗ:</strong></p>.<p>ಕನ್ನಡದಲ್ಲಿರುವ ವಚನ ಸಾಹಿತ್ಯವನ್ನು ಸ್ಪ್ಯಾನಿಷ್, ಜರ್ಮನ್, ಜಾಪನೀಸ್ ಭಾಷೆಗಳಿಗೆ ಅನುವಾದಿಸಲು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿ.ವಿಯು ಭಾಷಾ ತಜ್ಞರು ಸಹಯೋಗ ನೀಡಿದ್ದಾರೆ. ಈ ಕುರಿತು ಬಸವ ಸಮಿತಿ ಹಾಗೂ ಸಿಯುಕೆ 2021ರಲ್ಲಿ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದ್ದವು.</p>.<p>ಒಪ್ಪಂದದಡಿ ಕರ್ನಾಟಕ ಕೇಂದ್ರೀಯ ವಿವಿಯ ಪಿಯಾಲಿ ರಾಯ್ ಅವರು ಜಾಪನೀಸ್ ಭಾಷೆಗೆ, ಶಿವಂ ಮಿಶ್ರಾ ಜರ್ಮನ್ ಭಾಷೆಗೆ ಹಾಗೂ ಪಿ.ಕುಮಾರ ಮಂಗಲಂ ಸ್ಪ್ಯಾನಿಷ್ ಭಾಷೆಗೆ ವಚನಗಳ ಅನುವಾದಕ್ಕೆ ಶ್ರಮಿಸಿದ್ದಾರೆ. ಕರ್ನಾಟಕ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಗಣಪತಿ ಸಿನ್ನೂರ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ.</p>.<p>ಜಾಪನೀಸ್ ಭಾಷೆಯ ಅನುವಾದಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸುಧಾ ಶ್ರೀಧರ ಹಾಗೂ ಜರ್ಮನ್ ಭಾಷೆಯ ಅನುವಾದಕ್ಕೆ ಭಾನುಮೂರ್ತಿ ಅವರು ನೆರವಾಗಿದ್ದಾರೆ.</p>.<div><blockquote>ಬಸವಾದಿ ಶರಣರು ವಚನ ಸಾಹಿತ್ಯದಲ್ಲಿ ನೀತಿಗಳಿವೆ ಮೌಲ್ಯಗಳಿವೆ. ಅಂಥ ಸಾಹಿತ್ಯದ ಅನುವಾದಕ್ಕೆ ವಿಶ್ವವಿದ್ಯಾಲಯದ ಮೂವರು ವಿದೇಶಿ ಭಾಷೆಗಳ ತಜ್ಞರ ಸೇವೆ ಒದಗಿಸಿದ್ದಕ್ಕೆ ಹೆಮ್ಮೆ ಇದೆ’ </blockquote><span class="attribution">ಪ್ರೊ.ಬಟ್ಟು ಸತ್ಯನಾರಾಯಣ ಕುಲಪತಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ</span></div>.<p><strong>‘ಅನುವಾದದಲ್ಲಿ ಎ.ಐ ಬಳಕೆಗೆ ಚಿಂತನೆ’</strong> </p><p>‘ವಚನ ಸಾಹಿತ್ಯವನ್ನು ಕನ್ನಡದಿಂದ ಈತನಕ 28 ಭಾರತೀಯ ಭಾಷೆ ಹಾಗೂ 9 ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ. ಉಜ್ಬೇಕ್ ರಷ್ಯನ್ ಕೊರಿಯಾ ಭಾಷೆಗಳಿಗೆ ಅನುವಾದ ಕಾರ್ಯ ಪ್ರಗತಿಯಲ್ಲಿದೆ. ಈತನಕ ಸಂಪನ್ಮೂಲ ವ್ಯಕ್ತಿಗಳ ನೆರವು ಪಡೆಯುತ್ತಿದ್ದೆವು. ಇದೀಗ ಕೃತಕ ಬುದ್ಧಿಮತ್ತೆ ನೆರವಿನಲ್ಲಿ 2027ರ ಹೊತ್ತಿಗೆ ಆಯ್ದ 2500 ವಚನಗಳನ್ನು ಜಗತ್ತಿನ ಎಲ್ಲ ಭಾಷೆಗಳಿಗೂ ಅನುವಾದಿಸುವ ಗುರಿಯಿದೆ’ ಎನ್ನುತ್ತಾರೆ ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> 12ನೇ ಶತಮಾನದಲ್ಲಿ ವಿಶಿಷ್ಟ ಸಾಹಿತ್ಯ ಪ್ರಕಾರ, ಸಮಸಮಾಜ ನಿರ್ಮಾಣದ ಆಶಯ, ಕಾಯಕ, ದಾಸೋಹ, ಭಕ್ತಿ ಮಾರ್ಗ ತೋರುವ ಬಸವಾದಿ ಶರಣರ ವಚನಗಳ ಕಂಪು ಈಗ ಗಡಿಯಾಚೆಗೂ ಪಸರಿಸುತ್ತಿದೆ.</p>.<p>ಸಂಶೋಧಕ ದಿ.ಎಂ.ಎಂ.ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ರಾಜ್ಯ ಸರ್ಕಾರ ‘ಸಮಗ್ರ ವಚನ ಸಂಪುಟ’ಗಳನ್ನು ಪ್ರಕಟಿಸಿತ್ತು. ಅದರಿಂದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ 173 ಶರಣ–ಶರಣೆಯರ ಆಯ್ದ 2,500 ವಚನಗಳನ್ನು ಅನುವಾದಿಸುವ ಕಾರ್ಯ 2008ರಲ್ಲಿ ಶುರುವಾಗಿತ್ತು.</p>.<p>ಈತನಕ 28 ಭಾರತೀಯ ಹಾಗೂ 9 ವಿದೇಶಿ ಭಾಷೆಗಳಿಗೆ ಈ ವಚನಗಳು ಅನುವಾದಗೊಂಡಿವೆ. ಇದಕ್ಕಾಗಿ ಬಸವ ಸಮಿತಿಯು ಕರ್ನಾಟಕ ಕೇಂದ್ರಿಯ ವಿ.ವಿ (ಸಿಯುಕೆ), ಬನಾರಸ್ ಹಿಂದೂ ವಿ.ವಿ, ಅಸ್ಸಾಂ ವಿ.ವಿ, ಜೆಎನ್ಯು, ಕೆಯುಡಿ ಸೇರಿದಂತೆ 15 ವಿ.ವಿಗಳೊಂದಿಗೆ ಸೇರಿ ಹಗಲು ರಾತ್ರಿ ಪರಿಶ್ರಮದ ಬೆವರು ಹರಿಸಿದೆ.</p>.<p>ಏ.20ರಂದು ಬೆಂಗಳೂರಿನಲ್ಲಿ, ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಚೈನೀಸ್, ಜರ್ಮನ್, ಜಾಪನೀಸ್, ಫ್ರೆಂಚ್, ಸ್ಪ್ಯಾನಿಷ್, ನೇಪಾಳಿ ಭಾಷೆಗಳಲ್ಲಿ ಅನುವಾದಿತ ಕೃತಿಗಳ ಸಾಂಕೇತಿಕ ಬಿಡುಗಡೆಗೆ ಆಗಲಿದೆ. </p>.<p><strong>3 ಭಾಷೆಗಳಿಗೆ ಸಿಯುಕೆ ಸಹಯೋಗ:</strong></p>.<p>ಕನ್ನಡದಲ್ಲಿರುವ ವಚನ ಸಾಹಿತ್ಯವನ್ನು ಸ್ಪ್ಯಾನಿಷ್, ಜರ್ಮನ್, ಜಾಪನೀಸ್ ಭಾಷೆಗಳಿಗೆ ಅನುವಾದಿಸಲು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿ.ವಿಯು ಭಾಷಾ ತಜ್ಞರು ಸಹಯೋಗ ನೀಡಿದ್ದಾರೆ. ಈ ಕುರಿತು ಬಸವ ಸಮಿತಿ ಹಾಗೂ ಸಿಯುಕೆ 2021ರಲ್ಲಿ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದ್ದವು.</p>.<p>ಒಪ್ಪಂದದಡಿ ಕರ್ನಾಟಕ ಕೇಂದ್ರೀಯ ವಿವಿಯ ಪಿಯಾಲಿ ರಾಯ್ ಅವರು ಜಾಪನೀಸ್ ಭಾಷೆಗೆ, ಶಿವಂ ಮಿಶ್ರಾ ಜರ್ಮನ್ ಭಾಷೆಗೆ ಹಾಗೂ ಪಿ.ಕುಮಾರ ಮಂಗಲಂ ಸ್ಪ್ಯಾನಿಷ್ ಭಾಷೆಗೆ ವಚನಗಳ ಅನುವಾದಕ್ಕೆ ಶ್ರಮಿಸಿದ್ದಾರೆ. ಕರ್ನಾಟಕ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಗಣಪತಿ ಸಿನ್ನೂರ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ.</p>.<p>ಜಾಪನೀಸ್ ಭಾಷೆಯ ಅನುವಾದಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸುಧಾ ಶ್ರೀಧರ ಹಾಗೂ ಜರ್ಮನ್ ಭಾಷೆಯ ಅನುವಾದಕ್ಕೆ ಭಾನುಮೂರ್ತಿ ಅವರು ನೆರವಾಗಿದ್ದಾರೆ.</p>.<div><blockquote>ಬಸವಾದಿ ಶರಣರು ವಚನ ಸಾಹಿತ್ಯದಲ್ಲಿ ನೀತಿಗಳಿವೆ ಮೌಲ್ಯಗಳಿವೆ. ಅಂಥ ಸಾಹಿತ್ಯದ ಅನುವಾದಕ್ಕೆ ವಿಶ್ವವಿದ್ಯಾಲಯದ ಮೂವರು ವಿದೇಶಿ ಭಾಷೆಗಳ ತಜ್ಞರ ಸೇವೆ ಒದಗಿಸಿದ್ದಕ್ಕೆ ಹೆಮ್ಮೆ ಇದೆ’ </blockquote><span class="attribution">ಪ್ರೊ.ಬಟ್ಟು ಸತ್ಯನಾರಾಯಣ ಕುಲಪತಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ</span></div>.<p><strong>‘ಅನುವಾದದಲ್ಲಿ ಎ.ಐ ಬಳಕೆಗೆ ಚಿಂತನೆ’</strong> </p><p>‘ವಚನ ಸಾಹಿತ್ಯವನ್ನು ಕನ್ನಡದಿಂದ ಈತನಕ 28 ಭಾರತೀಯ ಭಾಷೆ ಹಾಗೂ 9 ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ. ಉಜ್ಬೇಕ್ ರಷ್ಯನ್ ಕೊರಿಯಾ ಭಾಷೆಗಳಿಗೆ ಅನುವಾದ ಕಾರ್ಯ ಪ್ರಗತಿಯಲ್ಲಿದೆ. ಈತನಕ ಸಂಪನ್ಮೂಲ ವ್ಯಕ್ತಿಗಳ ನೆರವು ಪಡೆಯುತ್ತಿದ್ದೆವು. ಇದೀಗ ಕೃತಕ ಬುದ್ಧಿಮತ್ತೆ ನೆರವಿನಲ್ಲಿ 2027ರ ಹೊತ್ತಿಗೆ ಆಯ್ದ 2500 ವಚನಗಳನ್ನು ಜಗತ್ತಿನ ಎಲ್ಲ ಭಾಷೆಗಳಿಗೂ ಅನುವಾದಿಸುವ ಗುರಿಯಿದೆ’ ಎನ್ನುತ್ತಾರೆ ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>