<p><strong>ವಾಡಿ:</strong> ಸಚಿವ ಪ್ರಿಯಾಂಕ್ ಖರ್ಗೆ ಅವರು ಉಪಮುಖ್ಯಮಂತ್ರಿಯಾಗಲಿ ಎಂದು ಹಲಕರ್ಟಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪ್ರಿಯಾಂಕ್ ಅಭಿಮಾನಿಗಳು ಸೋಮವಾರ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ 101 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು.</p>.<p>ಬೆಳಿಗ್ಗೆ ಕಾರ್ಯಕರ್ತರು ದೇವಸ್ಥಾನಕ್ಕೆ ಆಗಮಿಸಿ ಮೊದಲು ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ದೇವಸ್ಥಾನ ಆವರಣದಲ್ಲಿ 101 ಕಾಯಿ ಒಡೆದರು.</p>.<p>ಮುಖಂಡ ಇಬ್ರಾಹಿಂ ಪಟೇಲ್ ಮಾತನಾಡಿ, ‘ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪರ ರಾಜಕಾರಣಿ. ಸಿದ್ದು ಸಂಪುಟದಲ್ಲಿ ಖಾತೆ ಉತ್ತಮ ರೀತಿಯಲ್ಲಿ ನಿಭಾಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಗ್ರಾಮೀಣಭಿವೃದ್ಧಿ ಇಲಾಖೆಯನ್ನು ಅತೀ ಹೆಚ್ಚು ವರಮಾನ ಸಂಗ್ರಹಿಸಿದ ಖ್ಯಾತಿ ಗಳಿಸಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ನೀಡಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಾಗಬೇಕು’ ಎಂದರು.</p>.<p>ಸಿದ್ದು ಮುಗುಟಿ, ಗುರುನಾಥ ಮಣಿಗಿರಿ, ರಾಘವೇಂದ್ರ ಅಲ್ಲಿಪುರ, ಮಲ್ಲಿಕಾರ್ಜುನ ಹಣ್ಣಿಕೇರಾ ಮಾತನಾಡಿದರು.</p>.<p>ರಾಜುಗೌಡ ಪೊಲೀಸ್ ಪಾಟೀಲ, ಬಸವರಾಜ ಲೋಕನಹಳ್ಳಿ, ಚಂದ್ರಕಾಂತ ಮೇಲಿನಮನಿ, ಶರಣಪ್ಪ ಹಿಟ್ಟಿನ, ಸೈಯ್ಯದ್ ಇಮ್ತಿಯಾಜ್ ಪಟೇಲ, ಗೋವಿಂದ ಜಾಧವ, ಈರಣ್ಣ ಇಸಬಾ, ಶರಣು ಚಂದನಕೇರಿ, ಶಿವಯೋಗಿ ಬಂಗರಗಿ, ಸಿದ್ದರಾಮ ಬಾವಿಕಟ್ಟಿ, ಮೈಲಾರಿ ಸುಣಗಾರ, ಮಲ್ಲಿಕಾರ್ಜುನ ಹಣ್ಣಿಕೆರ, ನಿಂಗಪ್ಪ ನೆಲೋಗಿ, ಸಾಬಣ್ಣ ಬೆಳಗುಂಪಿ, ವೀರೇಶ ಕೊಟಗಿ, ಮರೆಪ್ಪ ಛತ್ರಿಕಿ, ಸಲೀಂ ವಾಡಿ, ಸಾಬಣ್ಣ ಜೈನಾಪುರ, ಭೀಮಾಶಂಕರ ನಾಲವಾರ ಹಾಗೂ ಇನ್ನಿತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-31-233745063</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ:</strong> ಸಚಿವ ಪ್ರಿಯಾಂಕ್ ಖರ್ಗೆ ಅವರು ಉಪಮುಖ್ಯಮಂತ್ರಿಯಾಗಲಿ ಎಂದು ಹಲಕರ್ಟಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪ್ರಿಯಾಂಕ್ ಅಭಿಮಾನಿಗಳು ಸೋಮವಾರ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ 101 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು.</p>.<p>ಬೆಳಿಗ್ಗೆ ಕಾರ್ಯಕರ್ತರು ದೇವಸ್ಥಾನಕ್ಕೆ ಆಗಮಿಸಿ ಮೊದಲು ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ದೇವಸ್ಥಾನ ಆವರಣದಲ್ಲಿ 101 ಕಾಯಿ ಒಡೆದರು.</p>.<p>ಮುಖಂಡ ಇಬ್ರಾಹಿಂ ಪಟೇಲ್ ಮಾತನಾಡಿ, ‘ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪರ ರಾಜಕಾರಣಿ. ಸಿದ್ದು ಸಂಪುಟದಲ್ಲಿ ಖಾತೆ ಉತ್ತಮ ರೀತಿಯಲ್ಲಿ ನಿಭಾಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಗ್ರಾಮೀಣಭಿವೃದ್ಧಿ ಇಲಾಖೆಯನ್ನು ಅತೀ ಹೆಚ್ಚು ವರಮಾನ ಸಂಗ್ರಹಿಸಿದ ಖ್ಯಾತಿ ಗಳಿಸಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ನೀಡಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಾಗಬೇಕು’ ಎಂದರು.</p>.<p>ಸಿದ್ದು ಮುಗುಟಿ, ಗುರುನಾಥ ಮಣಿಗಿರಿ, ರಾಘವೇಂದ್ರ ಅಲ್ಲಿಪುರ, ಮಲ್ಲಿಕಾರ್ಜುನ ಹಣ್ಣಿಕೇರಾ ಮಾತನಾಡಿದರು.</p>.<p>ರಾಜುಗೌಡ ಪೊಲೀಸ್ ಪಾಟೀಲ, ಬಸವರಾಜ ಲೋಕನಹಳ್ಳಿ, ಚಂದ್ರಕಾಂತ ಮೇಲಿನಮನಿ, ಶರಣಪ್ಪ ಹಿಟ್ಟಿನ, ಸೈಯ್ಯದ್ ಇಮ್ತಿಯಾಜ್ ಪಟೇಲ, ಗೋವಿಂದ ಜಾಧವ, ಈರಣ್ಣ ಇಸಬಾ, ಶರಣು ಚಂದನಕೇರಿ, ಶಿವಯೋಗಿ ಬಂಗರಗಿ, ಸಿದ್ದರಾಮ ಬಾವಿಕಟ್ಟಿ, ಮೈಲಾರಿ ಸುಣಗಾರ, ಮಲ್ಲಿಕಾರ್ಜುನ ಹಣ್ಣಿಕೆರ, ನಿಂಗಪ್ಪ ನೆಲೋಗಿ, ಸಾಬಣ್ಣ ಬೆಳಗುಂಪಿ, ವೀರೇಶ ಕೊಟಗಿ, ಮರೆಪ್ಪ ಛತ್ರಿಕಿ, ಸಲೀಂ ವಾಡಿ, ಸಾಬಣ್ಣ ಜೈನಾಪುರ, ಭೀಮಾಶಂಕರ ನಾಲವಾರ ಹಾಗೂ ಇನ್ನಿತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-31-233745063</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>