‘ಪ್ರತಿ ಶಾಸಕರ ನಿಧಿಗೆ ವಾರ್ಷಿಕ ₹ 2 ಕೋಟಿ ನಿಗದಿಯಾಗಿದೆ. ಈ ಅನುದಾನದಲ್ಲಿ ಆಯಾ ಕ್ಷೇತ್ರಗಳಲ್ಲಿ ರಸ್ತೆ, ಕಾಮಗಾರಿ, ಕುಡಿಯುವ ನೀರು, ಶಾಲೆ–ಅಂಗನವಾಡಿ–ಕಾಲೇಜುಗಳ ನಿರ್ಮಾಣ ಹಾಗೂ ದುರಸ್ತಿ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯದ ಶಾಸಕರಿಗೆ ಈ ನಿಧಿ ಬಳಕೆಯಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ₹ 2 ಕೋಟಿಗೆ ಬದಲು ಕೇವಲ ₹ 50 ಲಕ್ಷ ಬಿಡುಗಡೆ ಮಾಡಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ’ ಎಂದು ಟೀಕಿಸಿದ್ದಾರೆ.