‘ನಿರ್ಮಲಾ ಹಾಗೂ ಅವರ ಪತಿ ಸಾತಲಿಂಗಪ್ಪ ಮಂಗಳವಾರ ಬೇರೊಬ್ಬರ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು. ಕೆಲಸದಿಂದ ಮರಳಿ ದಾರಿಯಲ್ಲಿ ಬರುವಾಗ ಸ್ಥಳಕ್ಕೆ ಬಂದ ಮುಖ್ಯ ಆರೋಪಿನಾಗರಾಜ ರಾಮಚಂದ್ರಪ್ಪ ವಾಣಿ ಅವರ ಜತೆಗಿದ್ದ ರಾಮಚಂದ್ರಪ್ಪ ವಾಣಿ, ಶ್ರೀಶೈಲ ರಾಮಚಂದ್ರಪ್ಪ ವಾಣಿ, ಅಶೋಕ ಲಕ್ಷ್ಮಣ ಬಗಶೆಟ್ಟಿ ಸೇರಿಕೊಂಡು ಜಗಳ ತೆಗೆದರು. ಜಾತಿ ನಿಂದನೆ ಮಾಡಿ ಬೈದರು. ಈ ವೇಳೆ ಮಾತಿಗೆ ಮಾತು ಬೆಳೆದು ನಾಗರಾಜ ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಿದರು. ಅದರಲ್ಲಿ ಒಂದು ಗುಂಡು ಗಾಳಿಯಲ್ಲಿ ತೇಲಿ, ಇನ್ನೊಂದು ನಿರ್ಮಲಾ ಅವರ ಭುಜಕ್ಕೆ ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.