ಇದಕ್ಕೂ ಮುನ್ನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶೈಲಜಾ ಎಸ್. ಪಾಟೀಲ, ‘ಮಹಿಳೆ ತನ್ನೆಲ್ಲ ಕಷ್ಟ ಸಹಿಸಿಕೊಂಡು ಕುಟುಂಬದ ಒಳಿತಿಗಾಗಿ ಶ್ರಮಿಸುತ್ತಾಳೆ. ಕಲ್ಪನಾ ಚಾವ್ಲಾ, ಗಂಗೂಬಾಯಿ ಹಾನಗಲ್, ಸಾಲುಮರದ ತಿಮ್ಮಕ್ಕ, ಕಿರಣ್ ಬೇಡಿ, ಸುಧಾ ಮೂರ್ತಿ, ಪಿ.ವಿ.ಸಿಂಧು, ಹೆಲೆನ್ ಕೆಲ್ಲರ್, ಮೇಡಂ ಕ್ಯೂರಿ, ಮೇರಿ ಕೋಮ್ ಅವರಂಥ ಅನೇಕ ಮಹಿಳೆಯರು ಏಳು– ಬಿಳುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಅವರ ಯಶೋಗಾಥೆ ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಲಿ’ ಎಂದರು.