ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು ಈ ಭಾಗದ ಆರು ಜಿಲ್ಲೆಗಳ ಇತಿಹಾಸವನ್ನು ರಚಿಸಲು ಮಂಡಳಿ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಇತ್ತೀಚೆಗಷ್ಟೇ ಸಮಿತಿ ಸಭೆ ನಡೆದಿದ್ದು, ಇತಿಹಾಸ ಪುಸ್ತಕ ಹೊರಗೆ ಬರಲು ಇನ್ನಷ್ಟು ಸಮಯ ಬೇಕು. ಹೀಗಾಗಿ ಈ ಭಾಗದ ಪ್ರಾಗೈತಿಹಾಸ, ಶರಣರ ಕಲ್ಯಾಣ ಕ್ರಾಂತಿ, ಬಹಮನಿಗಳ ಕೋಟೆ, ಬಂದಾನವಾಜರ ಸುಧಾರಣಾ ಕ್ರಮಗಳು, ಹೈದರಾಬಾದ್ ನಿಜಾರ ಆಡಳಿತ, ರಜಾಕರ ದೌರ್ಜನ್ಯ ಮತ್ತಿತರ ಸಂಗತಿಗಳನ್ನು ಅರಿಯಬೇಕೆಂದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸದ್ಯಕ್ಕೆ ಅಧ್ಯಯನ ಭಾಗ್ಯವಂತೂ ಇಲ್ಲ.