ನಗರದ ಸಿದ್ಧಾರೂಢ ಮಠದ ಲಕ್ಷ್ಮಿದೇವಿ ತಾಯಿಯವರು, ಯಳವಂತಗಿಯ ಆನಂದಮಯಿ ತಾಯಿ, ಕೋಟನೂರ (ಡಿ)ನ ಜ್ಞಾನಯೋಗ ಪೀಠದ ಶ್ರದ್ಧಾನಂದ ಸ್ವಾಮೀಜಿ, ಬೀದರ್ ಗುರುದೇವಾಶ್ರಮದ ಗಣೇಶಾನಂದ ಮಹಾರಾಜರು, ಆಳೂರ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ, ಸೊಲ್ಲಾಪುರದ ಓಂಕಾರ ಆಶ್ರಮದ ಸುಶಾಂತಾ ತಾಯಿ, ಶಂಕರೆಮ್ಮ ತಾಯಿ, ನೀಲಾಂಬಿಕಾ ತಾಯಿ, ಕಲ್ಲಹಂಗರಗಾದ ಗೋಪಾಲರಾವ ಶಾಸ್ತ್ರಿ ಅವರು ಭಾಗವಹಿಸಲಿದ್ದು, ಸಿದ್ಧಾರೂಢ ಸ್ವಾಮಿಗಳ ಕಥಾಮೃತದ ಪಾರಾಯಣವನ್ನು ಷಣ್ಮುಖ ಬಿರಾದಾರ ನಡೆಸಿಕೊಡಲಿದ್ದರೆ. ಮೂರು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ 11ರವರೆಗೆ ಮತ್ತು ರಾತ್ರಿ 8ರಿಂದ 10ರವರೆಗೆ ವಿವಿಧ ವಿಷಯಗಳ ಕುರಿತು ಪ್ರವಚನ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದೆ.