ಕಲಬುರ್ಗಿ: ತಾಲ್ಲೂಕಿನ ಅಷ್ಟಗಾ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಭಗವಂತರಾಯ ಮಹದೇವಪ್ಪ ಕೆರಮಗಿ (18) ಮೃತಪಟ್ಟ ಯುವಕ. ಬೆಳಿಗ್ಗೆ ಹೊಲಕ್ಕೆ ಹೋಗಿದ್ದ ಯುವಕ ಮಧ್ಯಾಹ್ನದವರೆಗೂ ಕೆಲಸ ಮಾಡುತ್ತಿದ್ದ. 2 ಗಂಟೆ ಸುಮಾರಿಗೆ ಏಕಾಏಕಿ ಬಿರುಗಾಳಿ ಮಳೆ ಆರಂಭವಾಯಿತು. ಈ ಸಂದರ್ಭ ಸಿಡಿಲೆರಗಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.