ದುತ್ತರಗಾಂವ ಗ್ರಾಮದ ರೈತ ಈರಣ್ಣ ಹಾಗೂ ಇತರ 28 ಮಂದಿಯಿಂದ ಈ ವ್ಯಾಪಾರಿಗಳು 2005ರ ಫೆಬ್ರುವರಿಯಲ್ಲಿ ಸೂರ್ಯಪಾನ ಖರೀದಿಸಿದ್ದರು. 1,018 ಚೀಲ ಸೂರ್ಯಪಾನಕ್ಕೆ ₹ 1 ಲಕ್ಷದ ರಶೀದಿ ಕೊಟ್ಟಿದ್ದರು. ಹಣವನ್ನು ನಂತರ ಕೊಡುವುದಾಗಿ ನಂಬಿಸಿ ರಶೀದಿ ಮೇಲೆ ಸಹಿ ಪಡೆದಿದ್ದರು. ಮಾಲನ್ನು ಅಕ್ಕಲಕೋಟೆಯ ಆಯಿಲ್ ಮಿಲ್ಗೆ ಮಾರಾಟ ಮಾಡಿದ್ದರು. ನಂತರ ಬಂದ ಹಣವನ್ನು ರೈತರಿಗೆ ನೀಡದೆ ತಲೆಮರೆಸಿಕೊಂಡಿದ್ದರು.