‘ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೆ, ನಮ್ಮನ್ನು ರಾಜಕೀಯವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಮಲೆಕುಡಿಯ ಮಂದಿಯ ಸಣ್ಣ ಪುಟ್ಟ ಸಮಸ್ಯೆ ಉಂಟಾದರೂ ಅದನ್ನು ನಮ್ಮಲ್ಲೆ ಬಗೆಹರಿಸದೆ ಪೊಲೀಸ್ ಠಾಣೆಗೆ ಒಯ್ದು ಮತ್ತಷ್ಟು ಜಟಿಲಗೊಳಿಸಲಾಗುತ್ತದೆ. ನಮ್ಮ ಸಮಸ್ಯೆಯನ್ನು ಜನಪ್ರತಿನಿಧಿಗಳಾದ ತಾವು ಸರಿಪಡಿಸಬೇಕು’ ಎಂದು ಕಬ್ಬಿನಾಲೆಯ ರಘುರಾಮ ಗೌಡ, ಶೇಖರ ಗೌಡ ಮತ್ತು ಲಕ್ಷ್ಮಿನಾರಾಯಣ ಗೌಡ ಮನವಿ ಮಾಡಿದರು.