ಶಿವಮೊಗ್ಗ: ಮಂಗನಕಾಯಿಲೆ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದ ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಮೇಶ್ ಅವರಿಗೆ ಸೋಂಕು ತಗುಲಿದೆ.
ಜ್ವರದಿಂದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕಾಯಿಲೆ ಇರುವುದು ದೃಢಪಟ್ಟಿದೆ.
ಇದೇ ಮೊದಲ ಬಾರಿ ಭದ್ರಾವತಿ ತಾಲ್ಲೂಕಿನಸಂಕ್ಲಿಪುರ, ಬೆಳ್ಳಿಗೆರೆಗ್ರಾಮಗಳಲ್ಲಿ ದೊರೆತಮಂಗಗಳ ಮೃತದೇಹದಲ್ಲಿ ಮಂಗನ ಕಾಯಿಲೆ ವೈರಸ್ ಇರುವುದು ದೃಢಪಟ್ಟಿದೆ. ಅಲ್ಲಿಗೆ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಶಿವಮೊಗ್ಗ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳಲ್ಲೂ ಕಾಯಿಲೆ ಹಬ್ಬಿದೆ.