<p><strong>ಸುಂಟಿಕೊಪ್ಪ:</strong> ಸುಂಟಿಕೊಪ್ಪದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ 108 ವಸಂತಗಳನ್ನು ಪೂರೈಸಿದ್ದು, ಹಿರಿಯ ವಿದ್ಯಾರ್ಥಿಗಳ ತಂಡ ಶತಮಾನೋತ್ಸವದ ಆಚರಣೆಗೆ ಸಜ್ಜಾಗಿ ನಿಂತಿದೆ.</p>.<p>100 ವರ್ಷ ತುಂಬಿದರೂ ಶಿಕ್ಷಣ ಇಲಾಖೆಯು ಶತಮಾನೋತ್ಸವ ಆಚರಿಸದೆ ನಿರ್ಲಕ್ಷಿಸಿದ ಪರಿಣಾಮ, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದಾರೆ.</p>.<p>ಕೊಡಗಿನಲ್ಲಿ ಬ್ರಿಟಿಷರ ಆಳ್ವಿಕೆಯು 1834ರಿಂದ ಪ್ರಾರಂಭವಾಗುವ ಮೊದಲು ವಿದ್ಯಾಭ್ಯಾಸದ ಕ್ರಮವು ಕೈಮಠಗಳ ಮೂಲಕ ನಡೆಯುತ್ತಿತ್ತು. 1916ಕ್ಕೆ ಮೊದಲು ಸುಂಟಿಕೊಪ್ಪ ಹೋಬಳಿಯ ಅಂದಗೋವೆ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಉಲುಗುಲಿ ಹರದೂರಿನ ಪನ್ಯ ಸಣ್ಣಪ್ಪನವರು ಕಟ್ಟಿಸಿದ ದೇವಸ್ಥಾನದ ಪೌಳಿಯಲ್ಲಿಯೂ, ಕಾಂಡನಕೊಲ್ಲಿ ಹಾಲೇರಿಯಲ್ಲಿಯ ದೇವಸ್ಥಾನದಲ್ಲಿಯೂ ಕೈಮಠಗಳ ಶಾಲೆಗಳು ಖಾಸಗಿ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಣ ನೀಡುತ್ತಿದ್ದವು.</p>.<p>ಆದರೆ, ಸುಂಟಿಕೊಪ್ಪದ ಮಕ್ಕಳಿಗೆ ಈ ಮೇಲಿನ ಮಠಗಳಲ್ಲಿ ವಿದ್ಯಾಭ್ಯಾಸ ಮಾಡಲು ಅನನುಕೂಲವಾದಾಗ ಸ್ಥಳೀಯರು ಒಂದು ಸಮಿತಿ ರಚಿಸಿ ಆಗಿನ ಸರ್ಕಾರಕ್ಕೆ ಶಾಲೆಗಾಗಿ ಮನವಿ ಸಲ್ಲಿಸಿದ್ದರು. ಸ್ಥಳೀಯ ಆಸ್ಪತ್ರೆಯ ಮತ್ತು ಪೊಲೀಸ್ ಠಾಣೆಯ ಜಗಲಿಯಲ್ಲಿ ಶಾಲೆ ಪ್ರಾರಂಭವಾಯಿತು. ಪಾಠವನ್ನು ಆಸ್ಪತ್ರೆಯ ಕಾಂಪೌಂಡರ್ ಕಲಿಸುತ್ತಿದ್ದರು. ಅವರು ರಜೆಯಲ್ಲಿದ್ದರೆ ಪೊಲೀಸ್ ರೈಟರ್ ಒಬ್ಬರು ಪಾಠ ಕಲಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ಸಮಿತಿಯ ಅಧ್ಯಕ್ಷ ಪಿ.ತಿಮ್ಮಪ್ಪಯ್ಯ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಜಮಬಂದಿಯಲ್ಲಿ ಶಾಲೆಗಿರುವ ನಿವೇಶನವನ್ನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರು. ವಾಲೆಕಂಡ ಅಪ್ಪಚ್ಚ ತಾರೆಪತ್ತೆಗಾರರ ಸಹಕಾರದಿಂದ ಶಾಲೆಗಿರುವ ಸ್ಥಳವು ಮಂಜೂರಾಗಿತ್ತು.</p>.<p>ಪಾಂಡಂಡ ಅಪ್ಪಚ್ಚು ಮತ್ತು ಅವರ ಪುತ್ರರಾದ ಚಂಗಪ್ಪ ಮತ್ತು ನಂಜಪ್ಪ ಅವರು ಶಾಲೆಗೆ ಕಟ್ಟಡವನ್ನು 1916ರಲ್ಲಿ ಕಟ್ಟಿಸಿದ್ದರ ಫಲವಾಗಿ ಈಗ ಶಾಲೆಯು 108 ವರ್ಷ ಪೂರೈಸಿದೆ. 1945ರಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರು ತಮ್ಮ ತಂದೆ ಮಂಜಯ್ಯ ಸ್ಮರಣಾರ್ಥ ಕಟ್ಟಡ ಕಟ್ಟಿಸಿಕೊಟ್ಟರು. ಆ ಕಟ್ಟಡವೇ ಶಾಲೆಯ ಸಭಾಂಗಣವಾಗಿ ಮಾರ್ಪಾಟ್ಟಾಗಿತ್ತು.</p>.<p>ವೈ.ಡಿ.ಮಾದಯ್ಯ ಮತ್ತು ಇತರ ಸದಸ್ಯರ ಪ್ರಯತ್ನದಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಿ 1949ರಲ್ಲಿ 3 ಕೊಠಡಿಯ ಕಟ್ಟಡ ಹಾಗೂ 1950ರಲ್ಲಿ ಸಭಾಂಗಣದ ರಂಗಮಂಟಪ ಕಟ್ಟಿಸಲಾಗಿತ್ತು.</p>.<p>ಈ ಶಾಲೆಗೆ 5 ಎಕರೆ ಸ್ಥಳವಿದ್ದು, ಒಂದು ಎಕರೆ ಗದ್ದೆಯನ್ನು ವಿ.ಆರ್.ಜವರಪ್ಪ ಅವರಿಂದ ಸರ್ಕಾರವು ಪಡೆದು ಶಾಲೆಯ ಮೂಲ ಆದಾಯಕ್ಕೆ ಅವಕಾಶ ಮಾಡಿಕೊಟ್ಟಿತ್ತು. 3 ಎಕರೆ ಸ್ಥಳವು ಶಾಲೆ ಮತ್ತು ಮೈದಾನಕ್ಕಾಗಿ ಮೀಸಲಿಡಲಾಗಿತ್ತು. ಅಲ್ಲದೆ, ಒಂದು ಎಕರೆಯನ್ನು ಪಟ್ಟೆಮನೆ ಸಹೋದರರಾದ ಕೃಷ್ಣಪ್ಪ, ಮಾದಯ್ಯ ಮತ್ತು ಪೊನ್ನಪ್ಪ ಶಾಲೆಗೆ 1957ರಲ್ಲಿ ದಾನವಾಗಿ ನೀಡಿದ್ದರು.</p>.<p>ಈ ಶಾಲೆಯು ಹೋಬಳಿಯ ಇತರ 12 ಶಾಲೆಗಳಿಗೆ ಕೇಂದ್ರವಾಗಿದ್ದು, ವಲಯ ಮಟ್ಟದ ಚಟುವಟಿಕೆಗಳ ಕೇಂದ್ರವಾಗಿದೆ. 13 ಶಾಲೆಗಳ ಶಿಕ್ಷಕರ ಮಾಸಿಕ ಕೂಟವು ಈ ಶಾಲೆಯಲ್ಲಿ ನಡೆಯುತ್ತಿದೆ.</p>.<p>ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಸೂರ ನಂದ ಅವರ ನೇತೃತ್ವದ ಫುಟ್ಬಾಲ್ ತಂಡ 22 ಬಾರಿ ರಾಜ್ಯಮಟ್ಟದಲ್ಲಿ ಆಟವಾಡಿ 10 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.</p>.<p>ಈ ಶಾಲೆಯು 108 ವರ್ಷ ನಡೆದು ಬಂದ ದಾರಿ ಬಗ್ಗೆ ಸ್ಮರಿಸಲು, ಶತಮಾನೋತ್ಸವ ಆಚರಣೆಗಾಗಿ ಹಿರಿಯ ವಿದ್ಯಾರ್ಥಿಗಳ ತಂಡ ಸಿದ್ಧತೆ ನಡೆಸಿದೆ. ಮುಂದಿನ ಜನವರಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.</p>.<p><strong>ಹಿರಿಯ ವಿದ್ಯಾರ್ಥಿಗಳ ಸಾಧನೆ</strong> </p><p>ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಹಾಕಿ ಆಟಗಾರ ಮಾಳೆಯಂಡ ದೇವಯ್ಯ ಮುತ್ತಪ್ಪ ಭಾರತ ತಂಡದ ಒಲಿಂಪಿಕ್ಸ್ ಮಾಜಿ ನಾಯಕ ಬ್ಯಾಡ್ಮಿಂಟನ್ ಆಟಗಾರ ಮೊಳ್ಳೇರ ಪಿ.ಗಣೇಶ ಮತ್ತು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇರ ಜಿ.ಚಂಗಪ್ಪ 5 ವರ್ಷ ವಿಶ್ವ ಸೈಕಲ್ ಪರ್ಯಾಟನೆ ಕೈಗೊಂಡಿರುವ ಪಿ.ಸಿ.ಮಾಚಯ್ಯ ಮತ್ತು ಅನೇಕ ಪ್ರತಿಭಾವಂತರು ಈ ಶಾಲೆಯ ಹಿರಿಯ ವಿದ್ಯಾರ್ಥಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ:</strong> ಸುಂಟಿಕೊಪ್ಪದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ 108 ವಸಂತಗಳನ್ನು ಪೂರೈಸಿದ್ದು, ಹಿರಿಯ ವಿದ್ಯಾರ್ಥಿಗಳ ತಂಡ ಶತಮಾನೋತ್ಸವದ ಆಚರಣೆಗೆ ಸಜ್ಜಾಗಿ ನಿಂತಿದೆ.</p>.<p>100 ವರ್ಷ ತುಂಬಿದರೂ ಶಿಕ್ಷಣ ಇಲಾಖೆಯು ಶತಮಾನೋತ್ಸವ ಆಚರಿಸದೆ ನಿರ್ಲಕ್ಷಿಸಿದ ಪರಿಣಾಮ, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದಾರೆ.</p>.<p>ಕೊಡಗಿನಲ್ಲಿ ಬ್ರಿಟಿಷರ ಆಳ್ವಿಕೆಯು 1834ರಿಂದ ಪ್ರಾರಂಭವಾಗುವ ಮೊದಲು ವಿದ್ಯಾಭ್ಯಾಸದ ಕ್ರಮವು ಕೈಮಠಗಳ ಮೂಲಕ ನಡೆಯುತ್ತಿತ್ತು. 1916ಕ್ಕೆ ಮೊದಲು ಸುಂಟಿಕೊಪ್ಪ ಹೋಬಳಿಯ ಅಂದಗೋವೆ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಉಲುಗುಲಿ ಹರದೂರಿನ ಪನ್ಯ ಸಣ್ಣಪ್ಪನವರು ಕಟ್ಟಿಸಿದ ದೇವಸ್ಥಾನದ ಪೌಳಿಯಲ್ಲಿಯೂ, ಕಾಂಡನಕೊಲ್ಲಿ ಹಾಲೇರಿಯಲ್ಲಿಯ ದೇವಸ್ಥಾನದಲ್ಲಿಯೂ ಕೈಮಠಗಳ ಶಾಲೆಗಳು ಖಾಸಗಿ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಣ ನೀಡುತ್ತಿದ್ದವು.</p>.<p>ಆದರೆ, ಸುಂಟಿಕೊಪ್ಪದ ಮಕ್ಕಳಿಗೆ ಈ ಮೇಲಿನ ಮಠಗಳಲ್ಲಿ ವಿದ್ಯಾಭ್ಯಾಸ ಮಾಡಲು ಅನನುಕೂಲವಾದಾಗ ಸ್ಥಳೀಯರು ಒಂದು ಸಮಿತಿ ರಚಿಸಿ ಆಗಿನ ಸರ್ಕಾರಕ್ಕೆ ಶಾಲೆಗಾಗಿ ಮನವಿ ಸಲ್ಲಿಸಿದ್ದರು. ಸ್ಥಳೀಯ ಆಸ್ಪತ್ರೆಯ ಮತ್ತು ಪೊಲೀಸ್ ಠಾಣೆಯ ಜಗಲಿಯಲ್ಲಿ ಶಾಲೆ ಪ್ರಾರಂಭವಾಯಿತು. ಪಾಠವನ್ನು ಆಸ್ಪತ್ರೆಯ ಕಾಂಪೌಂಡರ್ ಕಲಿಸುತ್ತಿದ್ದರು. ಅವರು ರಜೆಯಲ್ಲಿದ್ದರೆ ಪೊಲೀಸ್ ರೈಟರ್ ಒಬ್ಬರು ಪಾಠ ಕಲಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ಸಮಿತಿಯ ಅಧ್ಯಕ್ಷ ಪಿ.ತಿಮ್ಮಪ್ಪಯ್ಯ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಜಮಬಂದಿಯಲ್ಲಿ ಶಾಲೆಗಿರುವ ನಿವೇಶನವನ್ನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರು. ವಾಲೆಕಂಡ ಅಪ್ಪಚ್ಚ ತಾರೆಪತ್ತೆಗಾರರ ಸಹಕಾರದಿಂದ ಶಾಲೆಗಿರುವ ಸ್ಥಳವು ಮಂಜೂರಾಗಿತ್ತು.</p>.<p>ಪಾಂಡಂಡ ಅಪ್ಪಚ್ಚು ಮತ್ತು ಅವರ ಪುತ್ರರಾದ ಚಂಗಪ್ಪ ಮತ್ತು ನಂಜಪ್ಪ ಅವರು ಶಾಲೆಗೆ ಕಟ್ಟಡವನ್ನು 1916ರಲ್ಲಿ ಕಟ್ಟಿಸಿದ್ದರ ಫಲವಾಗಿ ಈಗ ಶಾಲೆಯು 108 ವರ್ಷ ಪೂರೈಸಿದೆ. 1945ರಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರು ತಮ್ಮ ತಂದೆ ಮಂಜಯ್ಯ ಸ್ಮರಣಾರ್ಥ ಕಟ್ಟಡ ಕಟ್ಟಿಸಿಕೊಟ್ಟರು. ಆ ಕಟ್ಟಡವೇ ಶಾಲೆಯ ಸಭಾಂಗಣವಾಗಿ ಮಾರ್ಪಾಟ್ಟಾಗಿತ್ತು.</p>.<p>ವೈ.ಡಿ.ಮಾದಯ್ಯ ಮತ್ತು ಇತರ ಸದಸ್ಯರ ಪ್ರಯತ್ನದಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಿ 1949ರಲ್ಲಿ 3 ಕೊಠಡಿಯ ಕಟ್ಟಡ ಹಾಗೂ 1950ರಲ್ಲಿ ಸಭಾಂಗಣದ ರಂಗಮಂಟಪ ಕಟ್ಟಿಸಲಾಗಿತ್ತು.</p>.<p>ಈ ಶಾಲೆಗೆ 5 ಎಕರೆ ಸ್ಥಳವಿದ್ದು, ಒಂದು ಎಕರೆ ಗದ್ದೆಯನ್ನು ವಿ.ಆರ್.ಜವರಪ್ಪ ಅವರಿಂದ ಸರ್ಕಾರವು ಪಡೆದು ಶಾಲೆಯ ಮೂಲ ಆದಾಯಕ್ಕೆ ಅವಕಾಶ ಮಾಡಿಕೊಟ್ಟಿತ್ತು. 3 ಎಕರೆ ಸ್ಥಳವು ಶಾಲೆ ಮತ್ತು ಮೈದಾನಕ್ಕಾಗಿ ಮೀಸಲಿಡಲಾಗಿತ್ತು. ಅಲ್ಲದೆ, ಒಂದು ಎಕರೆಯನ್ನು ಪಟ್ಟೆಮನೆ ಸಹೋದರರಾದ ಕೃಷ್ಣಪ್ಪ, ಮಾದಯ್ಯ ಮತ್ತು ಪೊನ್ನಪ್ಪ ಶಾಲೆಗೆ 1957ರಲ್ಲಿ ದಾನವಾಗಿ ನೀಡಿದ್ದರು.</p>.<p>ಈ ಶಾಲೆಯು ಹೋಬಳಿಯ ಇತರ 12 ಶಾಲೆಗಳಿಗೆ ಕೇಂದ್ರವಾಗಿದ್ದು, ವಲಯ ಮಟ್ಟದ ಚಟುವಟಿಕೆಗಳ ಕೇಂದ್ರವಾಗಿದೆ. 13 ಶಾಲೆಗಳ ಶಿಕ್ಷಕರ ಮಾಸಿಕ ಕೂಟವು ಈ ಶಾಲೆಯಲ್ಲಿ ನಡೆಯುತ್ತಿದೆ.</p>.<p>ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಸೂರ ನಂದ ಅವರ ನೇತೃತ್ವದ ಫುಟ್ಬಾಲ್ ತಂಡ 22 ಬಾರಿ ರಾಜ್ಯಮಟ್ಟದಲ್ಲಿ ಆಟವಾಡಿ 10 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.</p>.<p>ಈ ಶಾಲೆಯು 108 ವರ್ಷ ನಡೆದು ಬಂದ ದಾರಿ ಬಗ್ಗೆ ಸ್ಮರಿಸಲು, ಶತಮಾನೋತ್ಸವ ಆಚರಣೆಗಾಗಿ ಹಿರಿಯ ವಿದ್ಯಾರ್ಥಿಗಳ ತಂಡ ಸಿದ್ಧತೆ ನಡೆಸಿದೆ. ಮುಂದಿನ ಜನವರಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.</p>.<p><strong>ಹಿರಿಯ ವಿದ್ಯಾರ್ಥಿಗಳ ಸಾಧನೆ</strong> </p><p>ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಹಾಕಿ ಆಟಗಾರ ಮಾಳೆಯಂಡ ದೇವಯ್ಯ ಮುತ್ತಪ್ಪ ಭಾರತ ತಂಡದ ಒಲಿಂಪಿಕ್ಸ್ ಮಾಜಿ ನಾಯಕ ಬ್ಯಾಡ್ಮಿಂಟನ್ ಆಟಗಾರ ಮೊಳ್ಳೇರ ಪಿ.ಗಣೇಶ ಮತ್ತು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇರ ಜಿ.ಚಂಗಪ್ಪ 5 ವರ್ಷ ವಿಶ್ವ ಸೈಕಲ್ ಪರ್ಯಾಟನೆ ಕೈಗೊಂಡಿರುವ ಪಿ.ಸಿ.ಮಾಚಯ್ಯ ಮತ್ತು ಅನೇಕ ಪ್ರತಿಭಾವಂತರು ಈ ಶಾಲೆಯ ಹಿರಿಯ ವಿದ್ಯಾರ್ಥಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>