<p><strong>ಮಡಿಕೇರಿ</strong>: ಕೊಡಗಿನ ಐತಿಹಾಸಿಕ ಚರ್ಚ್ಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತ ಹಾಗೂ ಬರೋಬರಿ 153 ವರ್ಷಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಇಲ್ಲಿನ ಶಾಂತಿ ಚರ್ಚ್ನಲ್ಲಿ ಇದೀಗ ಶತಮಾನೋತ್ತರ ಸುವರ್ಣ ಸಂಭ್ರಮ. ಫೆ. 18ರಂದು ನಡೆಯುವ ಈ ಮಹೋತ್ಸವದಲ್ಲಿ ಕರ್ನಾಟಕದ ದಕ್ಷಿಣ ಸಭಾ ಪ್ರಾಂತ್ಯದ ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಭಾಗವಹಿಸಲಿದ್ದಾರೆ.</p>.<p>ಬೆಳಿಗ್ಗೆ 9 ಗಂಟೆಗೆ ಶಾಂತಿ ಚರ್ಚ್ನಿಂದ ಆರಂಭವಾಗುವ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಪಾಲ್ಗೊಳ್ಳುವರು. ಜಿ.ಟಿ.ವೃತ್ತದವರೆಗೂ ಮೆರವಣಿಗೆ ನಡೆದ ನಂತರ 10 ಗಂಟೆಯ ನಂತರ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆಗಳು ಜರುಗಲಿವೆ.</p>.<p>ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್, ಕೆಎಸ್ಡಿ ಉಪಾಧ್ಯಕ್ಷರಾದ ಸಿಸ್ಟರ್ ಸುಜಾತಾ, ಕಾರ್ಯದರ್ಶಿ ವಿಲಿಯಂ ಕೇರಿ, ಖಜಾಂಚಿ ವಿನ್ಸೆಂಟ್ ಪಾಲನ್ನ ಭಾಗವಹಿಸುವರು. ಸಂಜೆ 6 ಗಂಟೆಗೆ ಚರ್ಚ್ನಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರು ಹಾಗೂ ಮತ್ತು ಅವರ ಕುಟುಂಬದವರೊಂದಿಗೆ ಆಧ್ಯಾತ್ಮಿಕ ಗೀತೆಗಳ ಸಂಗೀತ ಸಂಜೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಚರ್ಚ್ನ ಧರ್ಮಗುರು ಅಮೃತರಾಜ್ ಖೋಡೆ ಭಾಗವಹಿಸಲಿದ್ದಾರೆ.</p>.<p class="Subhead">ಹರ್ಮನ್ ಮೊಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ ಇದ್ದ ಚರ್ಚ್: ಈ ಚರ್ಚ್ 1870ರಲ್ಲಿ ಆರಂಭವಾಯಿತು. ಇಲ್ಲಿಯೇ ಹರ್ಮನ್ ಮೊಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ ಅವರು ತಮ್ಮ ಕನ್ನಡದ ಕೆಲಸವನ್ನು ಮುಂದುವರಿಸಿದರು. ಕೆಲಕಾಲ ಇಲ್ಲಿಯೇ ಇದ್ದ ಮೊಗ್ಲಿಂಗ್ ಅವರು ಅನಾರೋಗ್ಯದ ನಿಮಿತ್ತ ವಾಪಸ್ ತಮ್ಮ ದೇಶಕ್ಕೆ ಹೊರಟರು. ನಂತರ, ಇಲ್ಲಿ ಎಫ್.ಕಿಟ್ಟೆಲ್, ಸ್ಟಾಕ್ಸ್, ಕಾಫ್ಮನ್ ಹಾಗೂ ಆನಂದಪುರದ ಆನಂದರಾವ್ ಕೌಂಡಿನ್ಯ ಅವರು ಸೇವೆಗಳನ್ನು ಮುಂದುವರಿಸಿದರು. 1885ರ ಹೊತ್ತಿಗೆ ಆನಂದಪುರದಿಂದ ಮಡಿಕೇರಿಯನ್ನು ಪ್ರತ್ಯೇಕಿಸಿ ಪ್ರತ್ಯೇಕ ಕೇಂದ್ರವನ್ನಾಗಿ ಮಾಡಲಾಯಿತು.</p>.<p>ಸ್ವಾತಂತ್ರ್ಯನಂತರ ಶಾಂತಿ ಚರ್ಚ್ ನವೀಕರಣಗೊಂಡಿತು. ಗಂಟೆಗೋಪುರ ಸೇರಿದಂತೆ ಹಲವು ಹೊಸ ಕಟ್ಟಡಗಳು ನಿರ್ಮಾಣಗೊಂಡವು. ಇದೀಗ ಮೈಸೂರು ರಸ್ತೆಯಲ್ಲಿ ಕಣ್ಮನ ಸೆಳೆಯುವಂತೆ ಈ ಚರ್ಚ್ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗಿನ ಐತಿಹಾಸಿಕ ಚರ್ಚ್ಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತ ಹಾಗೂ ಬರೋಬರಿ 153 ವರ್ಷಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಇಲ್ಲಿನ ಶಾಂತಿ ಚರ್ಚ್ನಲ್ಲಿ ಇದೀಗ ಶತಮಾನೋತ್ತರ ಸುವರ್ಣ ಸಂಭ್ರಮ. ಫೆ. 18ರಂದು ನಡೆಯುವ ಈ ಮಹೋತ್ಸವದಲ್ಲಿ ಕರ್ನಾಟಕದ ದಕ್ಷಿಣ ಸಭಾ ಪ್ರಾಂತ್ಯದ ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಭಾಗವಹಿಸಲಿದ್ದಾರೆ.</p>.<p>ಬೆಳಿಗ್ಗೆ 9 ಗಂಟೆಗೆ ಶಾಂತಿ ಚರ್ಚ್ನಿಂದ ಆರಂಭವಾಗುವ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಪಾಲ್ಗೊಳ್ಳುವರು. ಜಿ.ಟಿ.ವೃತ್ತದವರೆಗೂ ಮೆರವಣಿಗೆ ನಡೆದ ನಂತರ 10 ಗಂಟೆಯ ನಂತರ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆಗಳು ಜರುಗಲಿವೆ.</p>.<p>ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್, ಕೆಎಸ್ಡಿ ಉಪಾಧ್ಯಕ್ಷರಾದ ಸಿಸ್ಟರ್ ಸುಜಾತಾ, ಕಾರ್ಯದರ್ಶಿ ವಿಲಿಯಂ ಕೇರಿ, ಖಜಾಂಚಿ ವಿನ್ಸೆಂಟ್ ಪಾಲನ್ನ ಭಾಗವಹಿಸುವರು. ಸಂಜೆ 6 ಗಂಟೆಗೆ ಚರ್ಚ್ನಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರು ಹಾಗೂ ಮತ್ತು ಅವರ ಕುಟುಂಬದವರೊಂದಿಗೆ ಆಧ್ಯಾತ್ಮಿಕ ಗೀತೆಗಳ ಸಂಗೀತ ಸಂಜೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಚರ್ಚ್ನ ಧರ್ಮಗುರು ಅಮೃತರಾಜ್ ಖೋಡೆ ಭಾಗವಹಿಸಲಿದ್ದಾರೆ.</p>.<p class="Subhead">ಹರ್ಮನ್ ಮೊಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ ಇದ್ದ ಚರ್ಚ್: ಈ ಚರ್ಚ್ 1870ರಲ್ಲಿ ಆರಂಭವಾಯಿತು. ಇಲ್ಲಿಯೇ ಹರ್ಮನ್ ಮೊಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ ಅವರು ತಮ್ಮ ಕನ್ನಡದ ಕೆಲಸವನ್ನು ಮುಂದುವರಿಸಿದರು. ಕೆಲಕಾಲ ಇಲ್ಲಿಯೇ ಇದ್ದ ಮೊಗ್ಲಿಂಗ್ ಅವರು ಅನಾರೋಗ್ಯದ ನಿಮಿತ್ತ ವಾಪಸ್ ತಮ್ಮ ದೇಶಕ್ಕೆ ಹೊರಟರು. ನಂತರ, ಇಲ್ಲಿ ಎಫ್.ಕಿಟ್ಟೆಲ್, ಸ್ಟಾಕ್ಸ್, ಕಾಫ್ಮನ್ ಹಾಗೂ ಆನಂದಪುರದ ಆನಂದರಾವ್ ಕೌಂಡಿನ್ಯ ಅವರು ಸೇವೆಗಳನ್ನು ಮುಂದುವರಿಸಿದರು. 1885ರ ಹೊತ್ತಿಗೆ ಆನಂದಪುರದಿಂದ ಮಡಿಕೇರಿಯನ್ನು ಪ್ರತ್ಯೇಕಿಸಿ ಪ್ರತ್ಯೇಕ ಕೇಂದ್ರವನ್ನಾಗಿ ಮಾಡಲಾಯಿತು.</p>.<p>ಸ್ವಾತಂತ್ರ್ಯನಂತರ ಶಾಂತಿ ಚರ್ಚ್ ನವೀಕರಣಗೊಂಡಿತು. ಗಂಟೆಗೋಪುರ ಸೇರಿದಂತೆ ಹಲವು ಹೊಸ ಕಟ್ಟಡಗಳು ನಿರ್ಮಾಣಗೊಂಡವು. ಇದೀಗ ಮೈಸೂರು ರಸ್ತೆಯಲ್ಲಿ ಕಣ್ಮನ ಸೆಳೆಯುವಂತೆ ಈ ಚರ್ಚ್ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>