ಕಳೆದ ಕೆಲವು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯ ಕುಮಾರ್ ಸೇತುವೆಯ ಗುಣಮಟ್ಟ ಖಾತರಿ ಬಗ್ಗೆ ಪರಿಶೀಲನೆ ನಡೆಸಿ, ಸೇತುವೆ ದುರ್ಬಲವಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೂ, ಸೇತುವೆಯ ಪುನರ್ ನಿರ್ಮಾಣ ಇದುವರೆಗೂ ಆಗಿಲ್ಲ. ಸೇತುವೆ ಕಿರಿದಾಗಿದ್ದು, ಒಂದು ವಾಹನ ಚಲಿಸಿದರೆ ಮತ್ತೊಂದು ವಾಹನಕ್ಕೆ ದಾರಿ ಇರುವುದಿಲ್ಲ.