ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜ್ಯ ಅಂಗವಿಕಲರ ಪರಿಷತ್ ಅಧ್ಯಕ್ಷ ಡಿ.ಕೆ.ಸುರೇಶ್ ಕುಮಾರ್ ಮಾತನಾಡಿ, ‘ಹುಟ್ಟುತ್ತಲೇ ಶ್ರವಣದೋಷ ಸಮಸ್ಯೆ ಎದುರಿಸುತ್ತಿದ್ದ ಧನಂಜಯ ಹಾಗೂ ಅಂಜಲಿ ಪರಸ್ಪರ ಒಪ್ಪಿ ವಿವಾಹವಾಗುತ್ತಿರುವುದು ಸಂತೋಷವಾಗಿದೆ. ಇಂತಹ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ನವ ಜೋಡಿಯ ಮುಂದಿನ ಜೀವನ ಸುಖ, ಸಮೃದ್ಧಿಯಿಂದ ಕೂಡಿರಲಿ’ ಎಂದು ಶುಭ ಹಾರೈಸಿದರು.