‘ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಸ್ಗಾಗಿ ಕಾಯುತ್ತಿದ್ದಅನ್ಹ ರಿಯಾಜ್ ಹಾಗೂ ಜುಲೈಕಾ ನಾಫಿಯಾ ಅವರ ಮೇಲೆ ಹಲ್ಲೆ ನಡೆಸಿದೆ’ ಎಂದು ಆರೋಪಿಸಿ, ಪೋಷಕರಾದ ಕೊಡ್ಲಿಪೇಟೆಯ ಎಂ.ಎಸ್.ರಿಯಾಜ್ ಪಾಶ, ಬ್ಯಾಡಗೊಟ್ಟದ ಅಬೂಬಕ್ಕರ್ ಶನಿವಾರಸಂತೆ ಠಾಣೆಗೆ ದೂರು ನೀಡಿದ್ದಾರೆ.
‘ಮದನ್ ಮತ್ತು ತನ್ಮಯ್ ಸೇರಿದಂತೆ 30ರಿಂದ 40 ಮಂದಿಯ ಗುಂಪು ಹಲ್ಲೆ ನಡೆಸಿದೆ’ ಎಂದು ಆರೋಪಿಸಿದ್ದಾರೆ.
‘ಆರೋಪಿಗಳು, ಹೆಣ್ಣುಮಕ್ಕಳನ್ನು ಎಳೆದಾಡಿ ಮಾನಸಿಕವಾಗಿ, ದೈಹಿಕವಾಗಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಹಲ್ಲೆ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಹಲ್ಲೆಯಿಂದ ದೇಹದ ಮೇಲೆ ಗಾಯಗಳಾಗಿವೆ. ಮಾಸ್ಕ್ ಮತ್ತು ಬುರ್ಕಾ ಹರಿದು ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.