‘ಮುಕ್ತಾಯದ ಹಂತದಲ್ಲಿದ್ದರೂ ಮಳೆಗಾಲಕ್ಕೆ ಸಾರ್ವಜನಿಕರ ಬಳಕೆಗೆ ಲಭಿಸುವುದು ಅನುಮಾನ ಎನಿಸಿದೆ. ಮೇಲ್ಸೇತುವೆಯ 3 ಭಾಗಗಳಲ್ಲಿ ಏರುವ ಮತ್ತು ಇಳಿಯುವ ಸ್ಥಳಗಳ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಮೇಲ್ಸೇತುವೆಗೆ ಹೊಂದಿಕೊಂಡಂತಿರುವ ಕನ್ನಿಕೆ ಮತ್ತು ಕಾವೇರಿ ನದಿಯ ಮೇಲ್ಭಾಗದಲ್ಲಿ ಅಡ್ಡಲಾಗಿ ಭೀಮ್ಗಳನ್ನು ಇರಿಸಲಾಗಿದ್ದು, 2
ಭಾಗಗಳಲ್ಲಿ ಕಾಂಕ್ರೀಟ್ ಹಾಕಲು ಬಾಕಿ ಉಳಿದಿದೆ. ಮೇಲ್ಸೇತುವೆಯಲ್ಲಿ ಡಾಂಬರೀಕರಣ ಹಾಗೂ ದೀಪದ ವ್ಯವಸ್ಥೆಗಳು ಆಗಬೇಕಿವೆ. ಕೆಲಸ ಕಾರ್ಯಗಳು ಇನ್ನೂ ಮಂದಗತಿಯಲ್ಲಿ ಸಾಗುತ್ತಿದ್ದು, ಈ ವರ್ಷದ ಮಳೆಗಾಲಕ್ಕೂ ಮೇಲ್ಸೇತುವೆ ಮರೀಚಿಕೆಯಾಗಲಿದೆ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.