ಬಾಳೆಲೆ ಕೊಪ್ಪಲು ಗ್ರಾಮದ ಮಹೇಶ್ ಕುಮಾರ್ ಎಂಬವರ ಮಗನಾದ ಬಾಲಕ ತ್ರಿನೇಶ್ ಮಧ್ಯಾಹ್ನ ಮೂವರು ಮಕ್ಕಳೊಂದಿಗೆ ಮನೆಯ ಸಮೀಪದಲ್ಲಿ ಇರುವ ಗದ್ದೆ ಬಯಲಿನ ಕೆರೆಯ ಬಳಿ ಆಟವಾಡಲು ತೆರಳಿದ್ದಾನೆ. ಈ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರ ಬಾಲಕರು ಓಡಿ ಬಂದು ಪೋಷಕರಿಗೆ ತಿಳಿಸಿದ್ದಾರೆ. ಕೂಡಲೆ ಕೆರೆಯ ಬಳಿ ಹೋಗುಷ್ಟರಲ್ಲಿ ಬಾಲಕ ಮುಳುಗಿ ಪ್ರಾಣ ಬಿಟ್ಟಿದ್ದ. ವಿಷಯ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.