ಮಡಿಕೇರಿ: ಕೊಡಗಿನಲ್ಲೂ ಶನಿವಾರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು 8 ಕೆ.ಜಿಯಷ್ಟು ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಕುಶಾಲನಗರ ಸಮೀಪದ ಮಾದಾಪಟ್ಟಣದ ಬಸವೇಶ್ವರ ದೇಗುಲ ಬಳಿ, ನಾಗಣ್ಣ ಎಂಬುವವರು ಮರಗೆಣಸು ಬೆಳೆಯ ಮಧ್ಯದಲ್ಲಿ ಗಾಂಜಾ ಬೆಳೆದಿದ್ದರು. 6 ಕೆ.ಜಿ ಗಾಂಜಾ ವಶಕ್ಕೆ ಪಡೆದು, ನಾಗಣ್ಣನನ್ನು ಬಂಧಿಸಲಾಗಿದೆ.
ಮಣಜೂರು ಬಸ್ ನಿಲ್ದಾಣದ ಬಳಿ ಗಾಂಜಾ ಮಾರುತ್ತಿದ್ದ ತೊರೆನೂರು ಗ್ರಾಮದ ನಿವೃತ್ತ ಗ್ರಾಮ ಲೆಕ್ಕಿಗ ಲಕ್ಷ್ಮಪ್ಪನನ್ನು ಬಂಧಿಸಲಾಗಿದೆ.