ನಂತರ, ಮದೆನಾಡು ಬಳಿಯ ಕರ್ತೋಜಿಯಲ್ಲಿ ಮಂಗಳೂರು ಹೆದ್ದಾರಿಗೆ ಕುಸಿದ ಗುಡ್ಡವನ್ನು ಅವರು ವೀಕ್ಷಿಸಿದರು. ಈ ವೇಳೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ಮಾತನಾಡಿ, ‘ಗುಡ್ಡವು ಕೇವಲ ಇಲ್ಲಿ ಮಾತ್ರವಲ್ಲ ಇದರ ಹಿಂದಿನಿಂದಲೂ ಕುಸಿಯುತ್ತಿದೆ. ಮೇಲ್ನೋಟಕ್ಕೆ ಇದು ಸಣ್ಣದು ಎನ್ನಿಸಬಹುದು. ಆದರೆ, ಸತತವಾಗಿ ಗುಡ್ಡದಿಂದ ಮಣ್ಣು ಜರಿಯುತ್ತಲೇ ಇದೆ’ ಎಂದು ಭೂಕುಸಿತದ ಸ್ವರೂಪವನ್ನು ತಂಡದ ಸದಸ್ಯರಿಗೆ ಮನದಟ್ಟು ಮಾಡಿಸಿದರು.