ಕೆಜಿಎಫ್: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಭ್ಯರ್ಥಿ ವಿ.ಮುನಿಸ್ವಾಮಿ ಭಾನುವಾರ ರಾಬರ್ಟ್ಸನ್ಪೇಟೆಯಲ್ಲಿ ಬೂಟ್ ಪಾಲಿಷ್ ಮಾಡುವ ಮೂಲಕ ಮತ ಯಾಚಿಸಿದರು.
ಸೂರಜ್ಮಲ್ ವೃತ್ತದಿಂದ ಮೆರವಣಿಗೆಯಲ್ಲಿ ಬೆಂಬಲಿಗರ ಜತೆ ಬಂದ ಅವರು ‘ಬದಲಾವಣೆಗಾಗಿ ಕೆಪಿಜೆಪಿಗೆ ಮತ ಚಲಾಯಿಸಿ. ಕ್ಷೇತ್ರದ ನಿರುದ್ಯೋಗಿಗಳ ಸಮಸ್ಯೆ ಹೇಗಿದೆ ಎನ್ನುವುದನ್ನು ಬೂಟ್ ಪಾಲಿಷ್ ಮಾಡುವ ಮೂಲಕ ತೋರಿಸಿದ್ದೇನೆ’ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು, ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡಿ ಗಮನ ಸೆಳೆದಿದ್ದರು.