ಮಾವುತರ ಕುಟುಂಬಸ್ಥರು ಆನೆಗಳನ್ನು ತೊಳೆದು ಶೃಂಗಾರ ಮಾಡಿದ್ದರು. ಆನೆಗಳು ದಸರಾ ಉತ್ಸವಕ್ಕೆ ಹೊರಡುವ ಹಿನ್ನೆಲೆಯಲ್ಲಿ ಮತ್ತಿಗೋಡು ಶಿಬಿರದಲ್ಲಿ ಸಂಭ್ರಮ ನೆಲೆಸಿತ್ತು.
ಶಿಬಿರದ ಆರ್ಎಫ್ಒ ಗಣರಾಜ್, ಡಿಆರ್ಎಫ್ಒ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಮೂರು ವರ್ಷದಿಂದ ಅಂಬಾರಿ ಹೊರುತ್ತಿರುವ ಅಭಿಮನ್ಯು ಈ ಬಾರಿಯೂ ಜವಾಬ್ದಾರಿ ಹೊರಲು ರಾಜ ಗಾಂಭಿರ್ಯದಿಂದ ಹೆಜ್ಜೆ ಹಾಕಿತು. ಅಭಿಮನ್ಯು ಆನೆಯ ಮಾವುತ ವಸಂತ ಆನೆಗೆ ವಿಶೇಷವಾಗಿ ಅಲಂಕಾರ ಮಾಡಿದ್ದರು.