ಮಡಿಕೇರಿ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಸಿ.ಡಿ ವಿಚಾರವಾಗಿ ಅವರದ್ದೇ ಪಕ್ಷದ ಶಾಸಕರು ಹೇಳಿಕೆ ಕೊಡುತ್ತಿದ್ದಾರೆ. ಈ ಸಿ.ಡಿ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ವಹಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ ಇಲ್ಲಿ ಶನಿವಾರ ಆಗ್ರಹಿಸಿದರು.
‘ಎಚ್.ವಿಶ್ವನಾಥ್, ಬಸವನಗೌಡ ಪಾಟೀಲ ಯತ್ನಾಳ ಅವರು ಜವಾಬ್ದಾರಿಯುತ ನಾಯಕರು. ಸಿ.ಡಿ ಇರುವುದರಿಂದಲೇ ಅವರು ಧೈರ್ಯದಿಂದ ಹೇಳಿಕೆ ನೀಡುತ್ತಿದ್ದಾರೆ. ತನಿಖೆಯಾದರೆ ಸತ್ಯಾಂಶವೆಲ್ಲವೂ ಹೊರಬರಲಿದೆ’ ಎಂದರು.