ಭಾನುವಾರ ಮಧ್ಯಾಹ್ನ 1.15ಕ್ಕೆ ದೇವಾಲಯದಿಂದ ಶ್ರೀಕೃಷ್ಣನದ್ದು ಎಂದು ನಂಬಲಾಗಿರುವ ಕೊಳಲನ್ನು ಹೊರ ತೆಗೆಯಲಾಯಿತು. ಹಬ್ಬಕ್ಕೆ ನಿಗದಿಪಡಿಸಿದ ಕುಟುಂಬದ ಹಿರಿಯರಾದ ಬಿದ್ದಿಯಂಡ ಹರೀಶ್ ಕೊಳಲನ್ನು ಹಿಡಿದು ನಿರ್ದಿಷ್ಟ ಸ್ಥಳಗಳಲ್ಲಿ ಮೂರು ಬಾರಿ ನುಡಿಸುತ್ತಾ ಊರ ಮಂದ್ಗೆ ಆಗಮಿಸಿದರು. ಅಶ್ವತ್ಥ ವೃಕ್ಷದ ಕೆಳಗೆ ಕೊಳಲು ನುಡಿಸಲಾಯಿತು. ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.