‘ಮತಯಾಚನೆಗೆ ಹೋದಾಗ ಭಕ್ತರು ಹಾಕುವ ಅಕ್ಕಿಯನ್ನು ಯಾವುದಾದರೊಂದು ಅನಾಥಾಶ್ರಮಕ್ಕೆ ದಾನ ಮಾಡುತ್ತೇನೆ. ಭಕ್ತರು ಹಾಕಿದ ಕಾಣಿಕೆ ಹಣದಲ್ಲಿ ನನ್ನ ಜೊತೆಗೆ ಪ್ರಚಾರಕ್ಕೆ ಬಂದಿದ್ದ ಮೂರ್ನಾಲ್ಕು ಮಂದಿಗೆ ತಿಂಡಿ, ಊಟ ಮಾಡಿಸುತ್ತೇನೆ. ನಾಮಪತ್ರ ಸಲ್ಲಿಸುವ ಮೊದಲೇ ಬನ್ಸೀಹಳ್ಳಿ, ಕಂಠಾಪುರ, ದೊಡ್ಡಘಟ್ಟ, ದೇವಪುರ, ಜಾನಕಲ್ಲು, ತಣಿಗೇಕಲ್ಲುಗ್ರಾಮದ ಕೆಲವು ಮನೆಗಳಲ್ಲಿ ಮತಯಾಚನೆ ಮಾಡಿದ್ದೇನೆ’ ಎಂದು ಸತೀಶ್ ತಿಳಿಸಿದರು.