ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1994–95ರಲ್ಲಿ ಯಾವುದೇ ಆಯೋಗದ ಶಿಫಾರಸು ಇಲ್ಲದೆ ಸರ್ಕಾರ ಬಲಿಜ ಸಮುದಾಯವನ್ನು ಪ್ರವರ್ಗ 2(ಎ)ಯಿಂದ ಪ್ರವರ್ಗ 3(ಎ)ಗೆ ಸೇರಿಸಿದೆ. ಅಂದು ಬಲಿಜ ಸಮುದಾಯದವರು ಪ್ರತಿಭಟಿಸಲಿಲ್ಲ. ನಮ್ಮ ಸಮುದಾಯದವರಿಗೆ ಸರಿಯಾದ ವಿದ್ಯಾಭ್ಯಾಸ, ಸರ್ಕಾರಿ ಉದ್ಯೋಗ ಸಿಗದೆ ಸಂಕಷ್ಟದಲ್ಲಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.