ಮಡಿಕೇರಿ: ಕೊಡಗಿನ ಕೆಲವೆಡೆ ಮಂಗಳವಾರ ಸಂಜೆ ಮತ್ತೆ ಭೂಮಿ ಕಂಪಿಸಿದೆ.
ಚೆಂಬು ಮತ್ತು ಸಂಪಾಜೆ ಭಾಗದಲ್ಲಿ ವಿಚಿತ್ರವಾದ ಶಬ್ದ ಭೂಮಿಯಿಂದ ಸಂಜೆ 4.45 ರಲ್ಲಿ ಕೇಳಿ ಬಂದಿತು. ಅದೇ ಸಮಯದಲ್ಲಿ ಭೂಮಿ ಕಂಪಿಸಿತು ಎಂದು ಸ್ಥಳೀಯರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪರಿಶೀಲಿಸುತ್ತಿರುವುದಾಗಿ ಕೇಂದ್ರದ ತಜ್ಞ ಅನನ್ಯ ವಾಸುದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.