ಅರಣ್ಯ ಪ್ರದೇಶದಿಂದ ದಾರಿತಪ್ಪಿ ಹೆದ್ದಾರಿಯಲ್ಲಿ ದರ್ಶನ ನೀಡಿದ್ದ ಆನೆಗಳು ಮತ್ತೆ ಕಾಡಿಗೆ ಹೋಗಲು ಹಿಂದೇಟು ಹಾಕುತ್ತಿವೆ. ಆರ್ಆರ್ಟಿ ಸಿಬ್ಬಂದಿ ಸಿಡಿಸುವ ಪಟಾಕಿ ಶಬ್ದಕ್ಕೆ ಎಲ್ಲೆಂದರಲ್ಲಿ ಓಡಾಡುತ್ತಿರುವ ಆನೆಗಳು, ಭಯ ಉಂಟು ಮಾಡುತ್ತಿವೆ. ಸಂಜೆಯವರೆಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ, ತುಂತುರು ಮಳೆ ಹಾಗೂ ಕತ್ತಲು ಆವರಿಸಿದ ಕಾರಣ, ಮಂಗಳವಾರ ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು. ಮತ್ತೆ ಬುಧವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಯಲಿದೆ.
ಪುಂಡಾನೆಗಳು ವಿರಾಜಪೇಟೆ ರಸ್ತೆ ದಾಟಿ ತಾಳತ್ಮನೆ ಗ್ರಾಮದತ್ತ ತೆರಳಿದಾಗ ನಾಗರಿಕರ ಕಣ್ಣಿಗೆ ಬಿದ್ದಿವೆ; ಭಯಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಅಲ್ಲಿಗೂ ತೆರಳಿ ಕಾರ್ಯಾಚರಣೆ ನಡೆಸಿದರು.