ಪೊನ್ನಂಪೇಟೆ (ಕೊಡಗು): ಕುಟ್ಟಾ ಸಮೀಪದ ನಾತಂಗಾಲ ಗ್ರಾಮದ ತೋಟದಲ್ಲಿ ಗುರುವಾರ ಕಾಡಾನೆ ದಾಳಿಗೆ ಕಾರ್ಮಿಕ ಯರವರ ಕರಿಯ (45) ಬಲಿಯಾಗಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂಟಿ ಸಲಗ ದಾಳಿ ಮಾಡಿದೆ. ಕೊಡಗಿನಲ್ಲಿ ಮತ್ತೆ ಕಾಫಿ ತೋಟಕ್ಕೆ ಕಾಡಾನೆಗಳು ಲಗ್ಗೆಯಿಡಲು ಆರಂಭಿಸಿದ್ದು ಅವುಗಳನ್ನು ಕಾಡಿಗೆ ಅಟ್ಟುವಂತೆ ಬೆಳೆಗಾರರು ಆಗ್ರಹಿಸಿದ್ದಾರೆ.