ಬೈಕ್ನಲ್ಲಿ ಇಬ್ಬರು ತಿತಿಮತಿ ಕಡೆಯಿಂದ ಆನೆಚೌಕೂರಿನತ್ತ ತೆರಳುತ್ತಿದ್ದಾಗ ‘ಭೀಮ’ ಎಂಬ ಸಾಕಾನೆ, ಮತ್ತಿಗೋಡು ಶಿಬಿರದ ರಸ್ತೆ ಬದಿಯಲ್ಲಿ ನಿಂತಿತ್ತು. ಆಗ, ಬೈಕ್ ಸವಾರರು ಆನೆಯ ಫೋಟೊ ತೆಗೆಯಲು ಮುಂದಾಗಿದ್ದಾರೆ. ಕೂಡಲೇ ಆನೆ ಕೆರಳಿ ಫೋಟೊ ತೆಗೆಯುವವರತ್ತ ತಿರುಗಿದೆ. ಬೈಕ್ ಅನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿದ ಸವಾರರು ಜೀವ ಉಳಿಸಿಕೊಂಡಿದ್ದಾರೆ.