ಅಂದು ಕೆರೆಗೆ ಬಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ಈ ಮರಿಯಾನೆ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ರಕ್ಷಣೆ ಮಾಡಿದ್ದರು. ಕೆರೆಯಿಂದ ಮೇಲೆದ್ದು ಬಮದಿದ್ದ ಮರಿಯಾನೆ ಗಾಬರಿಯಿಂದ ಓಡುತ್ತಿದ್ದಾಗ ದಾರಿಯಲ್ಲಿದ್ದ ಜೀಪು, ಕಾರು ಹಾಗೂ ಒಂದು ಬೈಕ್ ಅನ್ನು ಜಖಂಗೊಳಿಸಿತ್ತು. ನಾಲ್ಕು ದಿನಗಳಿಂದ ಹೆಗ್ಗಳ, ಬೂದಿಮಾಳ, ಕೆದಮುಳ್ಳೂರು, ಪಾಲಂಗಾಲದಲ್ಲಿ ಇದೇ ಮರಿಯಾನೆ ಕಾಣಿಸಿಕೊಂಡಿತ್ತು.