<p><strong>ಮಡಿಕೇರಿ:</strong> ದೇಶದ ಇತರೆ ಭಾಗಗಳಂತೆ ಕೊಡಗು ಜಿಲ್ಲೆಯಲ್ಲೂ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬರ ಎದುರಾಗಿದೆ. ಕಳೆದ 3 ದಿನಗಳಿಂದ ಒಂದೇ ಒಂದು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಜಿಲ್ಲೆಗೆ ಬಂದಿಲ್ಲ. ಸದ್ಯಕ್ಕೆ, ಪರಿಸ್ಥಿತಿ ಸುಧಾರಿಸುವ ಲಕ್ಷಣಗಳೂ ಇಲ್ಲ. ಹಾಗಾಗಿ, ಇವರು ಅಡುಗೆ ಅನಿಲ ಸಿಲಿಂಡರ್ಗಳನ್ನು ಮಿತವಾಗಿ ಬಳಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.</p>.<p>ಈಗಾಗಲೇ ಹಲವು ಹೋಟೆಲ್ಗಳಲ್ಲಿ ತಿನಿಸುಗಳ ಸಂಖ್ಯೆ ಕಡಿಮೆಯಾಗಿದೆ. 10 ತಿನಿಸುಗಳಿರುವ ಕಡೆ 5 ತಿನಿಸುಗಳಷ್ಟೇ ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ಇಡ್ಲಿ, ದೋಸೆಗಳನ್ನೂ ನಿಲ್ಲಿಸಲು ಚಿಂತಿಸಲಾಗಿದೆ.</p>.<p>ಹೆಚ್ಚು ಸಮಯ ತೆಗೆದುಕೊಳ್ಳುವ, ಹೆಚ್ಚು ಅಡುಗೆ ಅನಿಲ ಬೇಡುವ ತಿನಿಸುಗಳು ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಬಹುತೇಕ ಮಂದಿ ಮಾಲೀಕರು ಬಂದಿದ್ದಾರೆ. ಈಗ ಇರುವ ಸಿಲಿಂಡರ್ಗಳನ್ನೇ ಅತ್ಯಂತ ಜೋಪಾನವಾಗಿ, ಮಿತವಾಗಿ ಬಳಕೆ ಮಾಡಲು ನಿರ್ಧರಿಸಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೂರ್ಗ್ ಹೋಟೆಲ್, ರೆಸ್ಟೋರೆಂಟ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ‘ಇನ್ನೂ 8ರಿಂದ 10 ದಿನಗಳ ಕಾಲ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳು ಲಭ್ಯವಾಗುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ, ಎಲ್ಲ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಆದಷ್ಟು ಸಿಲಿಂಡರ್ ಉಳಿಸುವ ಕಡೆಗೆ ಗಮನ ಕೊಡಬೇಕು’ ಎಂದು ಹೇಳಿದರು.</p>.<p>‘ಚಹಾ, ಕಾಫಿ, ಹಾಲು ಕಾಯಿಸಲು ಇಂಡಕ್ಷನ್ ಸ್ಟವ್ ಬಳಕೆ ಮಾಡಿದರೆ ಆದಷ್ಟು ಅಡುಗೆ ಅನಿಲ ಸಿಲಿಂಡರ್ಗಳ ಉಳಿತಾಯವಾಗುತ್ತದೆ. ಸ್ಯಾಂಡ್ವಿಚ್, ಬ್ರೆಡ್ ಜಾಂನಂತಹ ತಿನಿಸುಗಳಿಂದಲೂ ಉಳಿತಾಯ ಸಾಧ್ಯ. ಹಾಗಾಗಿ, ಹೆಚ್ಚು ಸಮಯ ತೆಗೆದುಕೊಳ್ಳುವ ಹಾಗೂ ಹೆಚ್ಚು ಅಡುಗೆ ಅನಿಲ ಬೇಡುವ ತಿನಿಸುಗಳನ್ನು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಯಥಾಸ್ಥಿತಿಗೆ ಮರಳುವವರೆಗೆ ತಯಾರಿಸದೇ ಇದ್ದರೆ ಒಳಿತು’ ಎಂದರು.</p>.<p>ಸಹಾಯವಾಣಿ ತೆರೆಯಲು ಸಿದ್ಧತೆ ಮತ್ತೊಂದೆಡೆ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆ ಎದುರಾಗದಂತೆ ತಡೆಯಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಕೊಡಗು ಜಿಲ್ಲೆಯ ಎಲ್ಲ 18 ಅಡುಗೆ ಅನಿಲ ಏಜೆನ್ಸಿಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಜತೆಗೆ ಸಹಾಯವಾಣಿ ತೆರೆಯಲೂ ಸಿದ್ಧತೆ ನಡೆಸಿದ್ದಾರೆ. ಎಲ್ಲೂ ಸಹ ಕಾಳಸಂತೆಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ದುಬಾರಿ ಬೆಲೆಗೆ ಮಾರಾಟವಾಗದಂತೆ ತಡೆಯಲು ಪ್ರಯತ್ನ ನಡೆಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಾಖೆಯ ಉಪನಿರ್ದೇಶಕ ಭೀಮರಾಯ ‘ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಲಭ್ಯವಿಲ್ಲ. ಆದರೆ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಸಾಕಾಗುವಷ್ಟು ಲಭ್ಯವಿದೆ. ಹಾಗಾಗಿ ಜನರು ಆತಂಕಪಡುವ ಅಗತ್ಯ ಇಲ್ಲ’ ಎಂದರು. ಹಾಸ್ಟೆಲ್ಗಳು ಸರ್ಕಾರಿ ಆಸ್ಪತ್ರೆಗಳು ಅಂಗನವಾಡಿಗಳು ಮತ್ತು ಶಾಲೆಗಳಿಗೆ ಪತ್ರ ಬರೆದು ಅಡುಗೆ ಅನಿಲ ಸಿಲಿಂಡರ್ ಕೊರತೆಯಾದರೆ ತಕ್ಷಣ ಗಮನಕ್ಕೆ ತರುವಂತೆ ಕೋರಲಾಗಿದೆ. ಸದ್ಯ ಮನೆ ಬಳಕೆಯ ಸಿಲಿಂಡರ್ ಕೊರತೆಯಾಗಿರುವ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ದೇಶದ ಇತರೆ ಭಾಗಗಳಂತೆ ಕೊಡಗು ಜಿಲ್ಲೆಯಲ್ಲೂ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬರ ಎದುರಾಗಿದೆ. ಕಳೆದ 3 ದಿನಗಳಿಂದ ಒಂದೇ ಒಂದು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಜಿಲ್ಲೆಗೆ ಬಂದಿಲ್ಲ. ಸದ್ಯಕ್ಕೆ, ಪರಿಸ್ಥಿತಿ ಸುಧಾರಿಸುವ ಲಕ್ಷಣಗಳೂ ಇಲ್ಲ. ಹಾಗಾಗಿ, ಇವರು ಅಡುಗೆ ಅನಿಲ ಸಿಲಿಂಡರ್ಗಳನ್ನು ಮಿತವಾಗಿ ಬಳಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.</p>.<p>ಈಗಾಗಲೇ ಹಲವು ಹೋಟೆಲ್ಗಳಲ್ಲಿ ತಿನಿಸುಗಳ ಸಂಖ್ಯೆ ಕಡಿಮೆಯಾಗಿದೆ. 10 ತಿನಿಸುಗಳಿರುವ ಕಡೆ 5 ತಿನಿಸುಗಳಷ್ಟೇ ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ಇಡ್ಲಿ, ದೋಸೆಗಳನ್ನೂ ನಿಲ್ಲಿಸಲು ಚಿಂತಿಸಲಾಗಿದೆ.</p>.<p>ಹೆಚ್ಚು ಸಮಯ ತೆಗೆದುಕೊಳ್ಳುವ, ಹೆಚ್ಚು ಅಡುಗೆ ಅನಿಲ ಬೇಡುವ ತಿನಿಸುಗಳು ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಬಹುತೇಕ ಮಂದಿ ಮಾಲೀಕರು ಬಂದಿದ್ದಾರೆ. ಈಗ ಇರುವ ಸಿಲಿಂಡರ್ಗಳನ್ನೇ ಅತ್ಯಂತ ಜೋಪಾನವಾಗಿ, ಮಿತವಾಗಿ ಬಳಕೆ ಮಾಡಲು ನಿರ್ಧರಿಸಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೂರ್ಗ್ ಹೋಟೆಲ್, ರೆಸ್ಟೋರೆಂಟ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ‘ಇನ್ನೂ 8ರಿಂದ 10 ದಿನಗಳ ಕಾಲ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳು ಲಭ್ಯವಾಗುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ, ಎಲ್ಲ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಆದಷ್ಟು ಸಿಲಿಂಡರ್ ಉಳಿಸುವ ಕಡೆಗೆ ಗಮನ ಕೊಡಬೇಕು’ ಎಂದು ಹೇಳಿದರು.</p>.<p>‘ಚಹಾ, ಕಾಫಿ, ಹಾಲು ಕಾಯಿಸಲು ಇಂಡಕ್ಷನ್ ಸ್ಟವ್ ಬಳಕೆ ಮಾಡಿದರೆ ಆದಷ್ಟು ಅಡುಗೆ ಅನಿಲ ಸಿಲಿಂಡರ್ಗಳ ಉಳಿತಾಯವಾಗುತ್ತದೆ. ಸ್ಯಾಂಡ್ವಿಚ್, ಬ್ರೆಡ್ ಜಾಂನಂತಹ ತಿನಿಸುಗಳಿಂದಲೂ ಉಳಿತಾಯ ಸಾಧ್ಯ. ಹಾಗಾಗಿ, ಹೆಚ್ಚು ಸಮಯ ತೆಗೆದುಕೊಳ್ಳುವ ಹಾಗೂ ಹೆಚ್ಚು ಅಡುಗೆ ಅನಿಲ ಬೇಡುವ ತಿನಿಸುಗಳನ್ನು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಯಥಾಸ್ಥಿತಿಗೆ ಮರಳುವವರೆಗೆ ತಯಾರಿಸದೇ ಇದ್ದರೆ ಒಳಿತು’ ಎಂದರು.</p>.<p>ಸಹಾಯವಾಣಿ ತೆರೆಯಲು ಸಿದ್ಧತೆ ಮತ್ತೊಂದೆಡೆ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆ ಎದುರಾಗದಂತೆ ತಡೆಯಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಕೊಡಗು ಜಿಲ್ಲೆಯ ಎಲ್ಲ 18 ಅಡುಗೆ ಅನಿಲ ಏಜೆನ್ಸಿಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಜತೆಗೆ ಸಹಾಯವಾಣಿ ತೆರೆಯಲೂ ಸಿದ್ಧತೆ ನಡೆಸಿದ್ದಾರೆ. ಎಲ್ಲೂ ಸಹ ಕಾಳಸಂತೆಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ದುಬಾರಿ ಬೆಲೆಗೆ ಮಾರಾಟವಾಗದಂತೆ ತಡೆಯಲು ಪ್ರಯತ್ನ ನಡೆಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಾಖೆಯ ಉಪನಿರ್ದೇಶಕ ಭೀಮರಾಯ ‘ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಲಭ್ಯವಿಲ್ಲ. ಆದರೆ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಸಾಕಾಗುವಷ್ಟು ಲಭ್ಯವಿದೆ. ಹಾಗಾಗಿ ಜನರು ಆತಂಕಪಡುವ ಅಗತ್ಯ ಇಲ್ಲ’ ಎಂದರು. ಹಾಸ್ಟೆಲ್ಗಳು ಸರ್ಕಾರಿ ಆಸ್ಪತ್ರೆಗಳು ಅಂಗನವಾಡಿಗಳು ಮತ್ತು ಶಾಲೆಗಳಿಗೆ ಪತ್ರ ಬರೆದು ಅಡುಗೆ ಅನಿಲ ಸಿಲಿಂಡರ್ ಕೊರತೆಯಾದರೆ ತಕ್ಷಣ ಗಮನಕ್ಕೆ ತರುವಂತೆ ಕೋರಲಾಗಿದೆ. ಸದ್ಯ ಮನೆ ಬಳಕೆಯ ಸಿಲಿಂಡರ್ ಕೊರತೆಯಾಗಿರುವ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>