ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಅವರ ಪರಿಶ್ರಮದಿಂದ ಒಂದು ಬದಿಯಲ್ಲಿ ಬಾಲ್ಕನಿಗೆ ಚಾವಣಿ ಹಾಕಲಾಗಿದೆ. ಆದರೆ, ಗ್ಯಾಲರಿಯನ್ನು ಪುಂಡರು ಗಾಂಜಾ ಸೇವನೆ, ಮದ್ಯಪಾನದ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ಲೋಕೇಶ್ ಕುಮಾರ್, ಭಾರತೀಶ್ ಇನ್ನಿತರರು ಸೇರಿ ಮೈದಾನದಲ್ಲಿ ಕುಳಿತುಕೊಳ್ಳಲು ಬಾಲ್ಕನಿ ಕಾಮಗಾರಿ ಮಾಡಿಸಿದ್ದರು. ಆದರೆ, ಮೈದಾನದ ಒಂದು ಬದಿಯಲ್ಲಿ ಮಾತ್ರ ಈ ಸೌಲಭ್ಯ ಇದೆ.