ಅರಿಶಿನಗುಪ್ಪೆ ಬಳಿಯ ಕೃಷ್ಣಗಿರಿ ತೋಟದಲ್ಲಿ ಮಧ್ಯಾಹ್ನ ಓಡಾಡುವಾಗ ಜೇನುಹುಳುಗಳು ಕಚ್ಚಿ ಅಸ್ವಸ್ಥವಾಗಿದ್ದ ಭೋಜೆಗೌಡ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು. ಅವರಿಗೆ ಪತ್ನಿ ಗೀತಾ, ಪುತ್ರರಾದ ಜಯಕೀರ್ತಿ, ಹಿಮಕೀರ್ತಿ ಇದ್ದಾರೆ. ಭೋಜೆಗೌಡ ಅವರು ಎರಡು ಬಾರಿ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದರು.