ತಾಲ್ಲೂಕು ಕಾಳುಮೆಣಸಿಗೆ ಸೂಕ್ತ ಪ್ರದೇಶವಾಗಿದ್ದು, ಪ್ರಸಕ್ತ ವರ್ಷ ಗೌಡಳ್ಳಿ, ನೇರುಗಳಲೆ, ದೊಡ್ಡಮಳ್ತೆ, ಗೋಪಾಲಪುರ, ಗಣಗೂರು, ನೀಡ್ತ, ದುಂಡಳ್ಳಿ, ಮಾದಾಪುರ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಾಧಾರಣ ಫಸಲು ಇತ್ತು. ಬೇಸಿಗೆ ಮಳೆ ಬಾರದ ಹಿನ್ನೆಲೆಯಲ್ಲಿ ಮೆಣಸಿನ ಕಾಳು ದಪ್ಪವಾಗಿಲ್ಲ. ಬಳ್ಳಿಗಳಲ್ಲೆ ಒಣಗುತ್ತಿದೆ. ಇಂತಹ ಸಮಸ್ಯೆಗಳ ನಡುವೆ ತರಾತುರಿಯಲ್ಲಿ ಕಾಳುಮೆಣಸು ಕುಯ್ಲಿಗೆ ಮುಂದಾಗಿರುವ ಕೃಷಿಕರಿಗೆ ಕಾರ್ಮಿಕರ ಕೊರತೆಯೂ ಕಾಡುತ್ತಿದೆ.