ನಾಪೋಕ್ಲು: ಅಂತರರಾಜ್ಯ ವಾಹನ ಕಳ್ಳರನ್ನು ಬಂಧಿಸುವಲ್ಲಿ ನಾಪೋಕ್ಲು ಪೋಲಿಸರು ಯಶಸ್ವಿಯಾಗಿದ್ದಾರೆ.
ಮೇ 14ರಂದು ಮಧ್ಯರಾತ್ರಿ ನಾಪೋಕ್ಲು ಪಟ್ಟಣದಿಂದ ಪಿಕ್ಅಪ್ ಜೀಪ್ ಕಳುವಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸರು ಕಾಸರಗೋಡಿನಿಂದ ರಮ್ಸನ್ ಮತ್ತು ಸಮೀರ್ ಎಂಬವರನ್ನು ದಸ್ತಗಿರಿ ಮಾಡಿ ಕಳವು ಮಾಡಿದ ಪಿಕ್ಅಪ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದಾರೆ.
ದಸ್ತಗಿರಿಯಾದ ರಮ್ಸನ್ ಕಾಸರಗೋಡು, ಕಣ್ಣೂರು, ತ್ರಿಶೂರ್ ಜಿಲ್ಲೆಗಳಲ್ಲಿ ಅಪಾದಿತನಾಗಿದ್ದು ಹಿಂದೆ ಮಂಗಳೂರು, ಉಲ್ಲಾಳ, ಮೂಡಬಿದಿರೆ, ಸುಳ್ಯ, ಹಾಸನ,ಮಡಿಕೇರಿಗಳಲ್ಲಿ ವಾಹನ ಕಳವು ಪ್ರಕರಣಗಳಲ್ಲಿ ದಸ್ತಗಿರಿಯಾಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.