ಕೋಲಾರ ಮಾಜಿ ಸಂಸದ ಡಾ.ಜಿ.ವೆಂಕಟೇಶ್ ಮಾತನಾಡಿ, ಇಂದು ಕುಟುಂಬ ರಾಜಕಾರಣ ದೇಶದಲ್ಲಿ ಮೀತಿಮಿರಿದೆ. ಹಣ, ಹೆಂಡ, ಅಧಿಕಾರದ ದರ್ಪ, ಜಾತಿಯ ಬೆಂಬಲದಿಂದ ಅನರ್ಹರು ಜನಪ್ರತಿನಿಧಿಗಳಾಗುತ್ತಿರೆ. ಅರ್ಹತೆ ಇದ್ದರೂ ಸಹ ಸಾಮಾಜಿಕ ಕಳಕಳಿ ಇರುವವರು ಜನಪ್ರತಿನಿಧಿಗಳಾಗಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ಅಭಿವೃದ್ಧಿ ರಂಗ ಸಂಘಟನೆ ಮೂಲಕ ರಾಜ್ಯದ ಎಲ್ಲ ಕಡೆ ಜನರನ್ನು ಜಾಗೃತಿಗೊಳಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.